masthmagaa.com:
ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಪ್ರಧಾನಿ ಮೋದಿ ಇವತ್ತು ರೈತರ ಖಾತೆಗಳಿಗೆ 19,500 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಇದ್ರಿಂದ 9.75 ಕೋಟಿ ರೈತರಿಗೆ ಲಾಭವಾಗಿದೆ. ಈವರೆಗೆ ಸರ್ಕಾರ ಒಟ್ಟು 9 ಕಂತಿನಲ್ಲಿ 1.59 ಲಕ್ಷ ಕೋಟಿ ರೂಪಾಯಿಯನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದಂತಾಗಿದೆ. ದುಡ್ಡು ವರ್ಗಾವಣೆ ಮಾಡಿದ್ಮೇಲೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ದೇಶ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸ್ತಿದೆ. 2047ರಲ್ಲಿ 100ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಭಾರತದ ಸ್ಥಿತಿ ಏನು ಅನ್ನೋದನ್ನ ನಮ್ಮ ಕೃಷಿ, ಗ್ರಾಮ ಮತ್ತು ರೈತರಿಂದ ನಿರ್ಧಾರವಾಗುತ್ತೆ ಅಂತ ಹೇಳಿದ್ದಾರೆ. ಇದೇ ವೇಳೆ ಅಡುಗೆ ಎಣ್ಣೆ ಬಗ್ಗೆ ಮಾತನಾಡಿದ ಅವರು, ಇದ್ರ ಉತ್ಪಾದನೆಯಲ್ಲಿ ಭಾರತವನ್ನ ಸ್ವಾವಲಂಬಿಯಾಗಿಲು National Edible Oil Mission-Oil Palm ಯೋಜನೆ ಘೋಷಿಸಿದ್ಧಾರೆ. ಇದಕ್ಕೆ 11 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡೋದಾಗಿಯೂ ಮಾಹಿತಿ ನೀಡಿದ್ದಾರೆ.
-masthmagaa.com
Contact Us for Advertisement