masthmagaa.com:
ನಾಳೆಯಿಂದ ಚಳಿಗಾಲದ ಸಂಸತ್ ಅಧಿವೇಶನ ಶುರುವಾಗಲಿದ್ದು, ಇವತ್ತು ಸರ್ವಪಕ್ಷ ಸಭೆ ಕರೆಯಲಾಗಿತ್ತು. ಆದ್ರೆ ಪ್ರಧಾನಿ ಮೋದಿ ಇವತ್ತಿನ ಸರ್ವಪಕ್ಷ ಸಭೆಗೆ ಗೈರಾಗಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸಭೆಯಲ್ಲಿ ಭಾಗಿಯಾಗಿದ್ರು. ಒಟ್ಟು 31 ಪಕ್ಷಗಳು ಇಂದಿನ ಸಭೆಯಲ್ಲಿ ಭಾಗಿಯಾಗಿದ್ವು. ಈ ವೇಳೆ ಮಾತಾಡಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ಸಭೆಗೆ ಬರಬೇಕು. ಕೃಷಿ ಕಾಯ್ದೆಗಳು ಬೇರೆ ರೂಪದಲ್ಲಿ ಮತ್ತೆ ಬರುವ ಆತಂಕ ಇರೋದ್ರಿಂದ ಆ ಬಗ್ಗೆ ಸ್ವಲ್ಪ ಮಾಹಿತಿ ಪಡೆಯಬೇಕಿದೆ ಅಂತ ಹೇಳಿದ್ರು. ಈ ನಡುವೆ ಪ್ರಧಾನಿ ಮೋದಿ ಸರ್ವಪಕ್ಷ ಸಭೆಗೆ ಗೈರಾಗೋ ಮೂಲಕ ಸಂಪ್ರದಾಯ ಮುರಿದಿದ್ದಾರೆ ಅಂತ ಆರೋಪಗಳು ಕೇಳಿಬಂದ್ವು. ಅದಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಪ್ರಧಾನಿ ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗೋ ಯಾವುದೇ ಸಂಪ್ರದಾಯ ಇಲ್ಲ. ಆದ್ರೂ ಪ್ರಧಾನಿ ಮೋದಿ ಭಾಗಿಯಾಗ್ತಿದ್ರು ಅಷ್ಟೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement