masthmagaa.com:
ಗಣರಾಜ್ಯೋತ್ಸವ ಹೊತ್ತಲ್ಲಿ ನಡೆಯಬಹುದಾಗಿದ್ದ ಉಗ್ರ ದಾಳಿಯನ್ನು ಪಂಜಾಬ್ ಪೊಲೀಸರು ವಿಫಲಗೊಳಿಸಿದ್ದಾರೆ. ಗುರುದಾಸ್ಪುರದಲ್ಲಿ ಪೊಲೀಸರು ದೊಡ್ಡಮಟ್ಟದಲ್ಲಿ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಅಂಡರ್ ಬ್ಯಾರಲ್ ಗ್ರನೇಡ್ ಲಾಂಚರ್, ಗ್ರನೇಡ್, 3.79 ಕೆಜಿ ಆರ್ಡಿಎಕ್ಸ್, 9 ಎಲೆಕ್ಟ್ರಿಕಲ್ ಡೆಟೋನೇಟರ್ಸ್ ಮತ್ತು 2 ಸೆಟ್ ಎಲ್ಇಡಿಯ ಟೈಮರ್ ಡಿವೈಸ್ಗಳು ಪತ್ತೆಯಾಗಿವೆ ಅಂತ ಐಜಿಪಿ ಮೋಹ್ನಿಶ್ ಚಾವ್ಲಾ ತಿಳಿಸಿದ್ದಾರೆ. ಮಲ್ಕೀತ್ ಸಿಂಗ್ ಎಂಬಾತನ ಬಂಧನದ ಬಳಿಕ ಈ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದ್ರ ಬೆನ್ನಲ್ಲೇ ಪಿತೂರಿಯಲ್ಲಿ ಭಾಗಿಯಾಗಿದ್ದ ಸುಖ್ಪ್ರೀತ್ ಸಿಂಗ್, ಥರನ್ಜೋತ್ ಸಿಂಗ್, ಸುಖ್ಮೀತ್ಪಾಲ್ ಸಿಂಗ್, ಗ್ಯಾಂಗ್ಸ್ಟರ್ ಅರ್ಶ್ದೀಪ್ ಸಿಂಗ್, ಪಾಕಿಸ್ತಾನ ಮೂಲದ ಸಿಖ್ ಯೂತ್ ಫೆಡರೇಷನ್ ಚೀಫ್ ಲಖ್ಬೀರ್ ಎಸ್ ರೋಡ್ ಅರೆಸ್ಟ್ ಆಗಿದ್ದಾರೆ ಅಂತ ಕೂಡ ಐಜಿಪಿ ಮೋಹ್ನೀಶ್ ಚಾವ್ಲಾ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 3ರಂದು ಇದೇ ಗುರುದಾಸ್ಪುರದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಬೆಂಬಲಿತ ಉಗ್ರ ಸಂಚನ್ನು ವಿಫಲಗೊಳಿಸಲಾಗಿತ್ತು. ಟಿಫಿನ್ ಸ್ಫೋಟಕ ಮತ್ತು ನಾಲ್ಕು ಹ್ಯಾಂಡ್ ಗ್ರನೇಡ್ಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಮತ್ತೆ ಅದೇ ಜಾಗದಲ್ಲಿ, ಅದು ಕೂಡ ಗಣರಾಜ್ಯೋತ್ಸವ ಹತ್ತಿರದಲ್ಲಿರುವ ಹೊತ್ತಲ್ಲಿ ಶಸ್ತ್ರಾಸ್ತ್ರ ಪತ್ತೆಯಾಗಿರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ತನಿಖೆ ಮುಂದುವರಿದಿದೆ.
-masthmagaa.com
Contact Us for Advertisement