ಮಂಗಳೂರಿನ ಕಾಡುಮೇಡು ಅಲೆದು ಹಣ್ಣು ಕಿತ್ತು ತಿಂದ ಪೂಜಾ ಹೆಗ್ಡೆ !

masthmagaa.com:

ಬಹುಭಾಷಾ ನಟಿ ಪೂಜಾ ಹೆಗ್ಡೆ ಮಂಗಳೂರಿಗೆ ಭೇಟಿ ನೀಡಿದ್ದಾರೆ. ಪೂಜಾ ಹೆಗ್ಡೆ ಕರಾವಳಿ ಮೂಲದವರು. ಬಹುಭಾಷಾ ನಟಿ ಪೂಜಾ ಹೆಗ್ಡೆ ಹೈದರಾಬಾದ್, ಮುಂಬೈ ಸೇರಿದಂತೆ ಅನೇಕ ಕಡೆ ಮನೆಗಳನ್ನು ಹೊಂದಿದ್ದಾರೆ. ಸಮಯ ಸಿಕ್ಕಾಗ ಪೂಜಾ ಹೆಗ್ಡೆ ಮಂಗಳೂರಿಗೆ ಬರುತ್ತಾರೆ. ಸಮಯ ಕಳೆದು ಹೋಗುತ್ತಾರೆ. ಇದೀಗ ಮಂಗಳೂರಿಗೆ ಬಂದು ಸುತ್ತಾಡಿ ಹೆಬ್ಬಲಸು ಕಿತ್ತು ತಿಂದಿದ್ದಾರೆ. ಸಂಪ್ರದಾಯಿಕ ಉಡುಗೆ ತೊಟ್ಟು ಪ್ರಕೃತಿ ಮಧ್ಯೆ ನಿಂತು ಹೆಬ್ಬಲಸು ಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ಪೋಟೋ ಕ್ಲಿಕ್ಕಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ʻಮಂಗಳೂರಿಗೆ ಒಂದು ಕ್ವಿಕ್‌ ಟ್ರಿಪ್‌ ಹಾಗೂ ಪೆಜೆಕಾಯಿಯ ಒಂದು ಕ್ವಿಕ್‌ ಹಂಟ್‌ʼ ಎಂದು ಬರೆದುಕೊಂಡಿದ್ದಾರೆ.

ನಟಿ ಪೂಜಾ ಹೆಗ್ಡೆ ಸದ್ಯ ʻʻಕಿಸಿ ಕಾ ಭಾಯ್ ಸಿಕಿ ಕಿ ಜಾನ್ʼʼ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸಲ್ಮಾನ್ ಖಾನ್ ಜೊತೆ ಮೊದಲ ಬಾರಿಗೆ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಇನ್ನು ಮಹೇಶ್ ಬಾಬು ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ ಆಗಲಿದ್ದಾರೆ.

-masthmagaa.com

Contact Us for Advertisement

Leave a Reply