masthmagaa.com:
ಇಡೀ ವಿಶ್ವ ಸ್ವಯಂ ವಿನಾಶದ ಅಂಚಿನಲ್ಲಿದೆ ಅಂತ ಪೋಪ್ ಫ್ರಾನ್ಸಿಸ್ ಎಚ್ಚರಿಸಿದ್ದಾರೆ. ವಿಶ್ವದ ರಾಜಕೀಯ ನಾಯಕರು ಧೈರ್ಯದಿಂದ ಕೊರೋನಾವನ್ನೇ ಒಂದು ಅವಕಾಶವನ್ನಾಗಿ ಬಳಸಿಕೊಂಡು ಭೂಮಿಯನ್ನು ಸುಂದರ ಮತ್ತು ಹಸಿರಾದ ಗ್ರಹವನ್ನಾಗಿ ಮಾಡಬೇಕು. ಇಲ್ಲವಾದ್ರೆ ವಿನಾಶ ಖಚಿತ ಅಂತ ಹೇಳಿದ್ದಾರೆ. ನಿನ್ನೆ ವಿಶ್ವ ಭೂಮಿ ದಿನಾಚರಣೆ.. ಹೀಗಾಗಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಪೋಪ್ ಫ್ರಾನ್ಸಿಸ್, ಕೊರೋನಾ ಮತ್ತು ಹವಮಾನ ಬದಲಾವಣೆ ಎರಡೂ ಕೂಡ ಜಾಗತಿಕ ದುರಂತವಾಗಿ ನಿಂತಿದ್ದು, ನಮ್ಮ ಬಳಿ ವ್ಯರ್ಥ ಮಾಡಲು ಸಮಯ ಉಳಿದಿಲ್ಲ ಅಂತ ಹೇಳಿದ್ಧಾರೆ. ಜೊತಗೆ ಪ್ರಂಪಚದ ದೊಡ್ಡ ದೊಡ್ಡ ನಾಯಕರು ಧೈರ್ಯವಾಗಿ, ನ್ಯಾಯಯುತವಾಗಿ ವರ್ತಿಸಬೇಕು. ಜನರಿಗೆ ಯಾವಾಗಲೂ ಸತ್ಯವನ್ನು ಹೇಳಬೇಕು.. ಇದ್ರಿಂದ ಜನರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು..? ಗ್ರಹವನ್ನು ವಿನಾಶದಿಂದ ಹೇಗೆ ರಕ್ಷಿಸಬೇಕು ಅನ್ನೋದನ್ನ ತಿಳಿದುಕೊಳ್ಳುತ್ತಾರೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement