masthmagaa.com:
ಕಿರುತರೆಯ ಪ್ರಸಿದ್ದ ಸಿಂಗಿಂಗ್ ರಿಯಾಲಿಟಿ ಶೋ ʻಸರಿಗಮಪ 19ʼ ಫಿನಾಲೇ ಎಪಿಸೋಡ್ ಎಪ್ರಿಲ್ 15 ಹಾಗೂ 16 ರಂದು ಪ್ರಸಾರವಾಯಿತು. ಮಡಿಕೇರಿಯ ಕುಶಾಲನಗರದ ಪ್ರಗತಿ ಬಡಿಗೇರ್ ʻಸರಿಗಮಪ 19 ಟೈಟಲ್ನ್ನ ಮುಡಿಗೇರಿಸಿಕೊಂಡಿದ್ದಾರೆ. ಪ್ರಗತಿ ಬಡಿಗೇರ್ಗೆ ಬಹುಮಾನವಾಗಿ, ನೆಲಮಂಗಲ ಪ್ರಾಜೆಕ್ಟ್ನ ಅಶ್ವಸೂರ್ಯ ಬಡಾವಣೆಯಲ್ಲಿ 30-40 ಅಡಿಯ ಸೈಟ್ ಸಿಕ್ಕಿದೆ. 21 ಲಕ್ಷ ರೂಪಾಯಿ ಇದರ ಮೌಲ್ಯ. ಇದರ ಜೊತೆ 4 ಲಕ್ಷ ರೂಪಾಯಿ ನಗದು ದೊರೆತಿದೆ. ಇನ್ನೂ ಫಿನಾಲೇ ರೇಸ್ನಲ್ಲಿದ್ದ ಉಡುಪಿಯ ಶಿವಾನಿ ಮೊದಲ ರನ್ನರ್ ಅಪ್ ಆದರೆ, ಮಂಗಳೂರಿನ ತನುಶ್ರೀ ಎರಡನೇ ರನ್ನರ್ ಅಪ್ ಆಗಿದ್ದಾರೆ. ಮೊದಲ ರನ್ನರ್ ಅಪ್ ಶಿವಾನಿಗೆ 20 ಲಕ್ಷ ರೂಪಾಯಿ ಕ್ಯಾಶ್ ಸಿಕ್ಕಿದೆ. ಎರಡನೇ ರನ್ನರ್ ಅಪ್ ತನುಶ್ರೀಗೆ ಐದು ಲಕ್ಷ ರೂಪಾಯಿ ಎಲೆಕ್ಟ್ರಿಕ್ ವಾಹನ ಹಾಗೂ ಐದು ಲಕ್ಷ ರೂಪಾಯಿ ನಗದು ದೊರೆತಿದೆ.
ಈ ಬಾರಿಯ ‘ಸರಿಗಮಪ’ ಫಿನಾಲೆ ಕೊಪ್ಪಳದಲ್ಲಿ ನಡೆದಿದೆ. ಅದ್ದೂರಿ ವೇದಿಕೆ ಮೇಲೆ ಅನುಶ್ರೀ ಆ್ಯಂಕರಿಂಗ್ ಮಾಡಿದರು. ಹಂಸಲೇಖ ಮಹಾಗುರುಗಳಾಗಿ ವೇದಿಕೆ ಮೇಲಿದ್ದರು. ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮೊದಲಾದವರು ಜಡ್ಜ್ ಸ್ಥಾನದಲ್ಲಿದ್ದರು.
-masthmagaa.com
Contact Us for Advertisement