masthmagaa.com:
ರಾಷ್ಟ್ರಪತಿ ಚುನಾವಣಾ ಅಖಾಡಕ್ಕೆ ದಿನಗಣನೆ ಆರಂಭವಾಗ್ತಿದ್ದಂತೆ ಇತ್ತ ಬಿಜೆಪಿ ಹಾಗೂ ವಿಪಕ್ಷಗಳ ಅಭ್ಯರ್ಥಿಗಳು ಫೈನಲ್ ಆಗಿದ್ದಾರೆ. TMC ನೇತೃತ್ವದ ವಿಪಕ್ಷಗಳ ಕಡೆಯಿಂದ ಕೇಂದ್ರದ ಮಾಜಿ ಹಣಕಾಸು ಸಚಿವ ಯಶ್ವಂತ್ ಸಿನ್ಹಾಅವರನ್ನ ಕಣಕ್ಕಿಳಿಸಲಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ನೇತೃತ್ವದ NDA ಮೈತ್ರಿಕೂಟ ತನ್ನ ಅಭ್ಯರ್ಥಿಯಾಗಿ ಒಡಿಶಾ ಮೂಲದ, ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮುರನ್ನ ಘೋಷಣೆ ಮಾಡಿದೆ. ಈ ಮೂಲಕ ಈ ಬಾರಿ ಕೂಡ ಅಭ್ಯರ್ಥಿಯ ಆಯ್ಕೆಯಲ್ಲಿ ನಮಷ್ಟು ಸಸ್ಪೆನ್ಸ್ ಕೊಡೋಕೆ ಯಾರಿಗೂ ಸಾಧ್ಯವಿಲ್ಲ ಅಂತ ಮತ್ತೆ ಸಾಬೀತು ಮಾಡಿದೆ. ಯಾಕಂದ್ರೆ ವಿಪಕ್ಷಗಳ ಅಭ್ಯರ್ಥಿಯ ಬಗ್ಗೆ ನಾಲ್ಕೈದು ಹೆಸರು ಕೇಳಿ ಬಂದ್ವಿದ್ವು. ಆದ್ರೆ ಬಿಜೆಪಿ ಹೈಕಮಾಂಡ್ ಮಾತ್ರ ತನ್ನ ಪಕ್ಷದ ರಣತಂತ್ರವನ್ನ, ಅಭ್ಯರ್ಥಿಯ ಹೆಸರನ್ನ ಎಲ್ಲಿಯೂ ಲೀಕ್ ಆಗೋಕೆ ಬಿಟ್ಟಿಲ್ಲ. ಇನ್ನು ಈ ಹೊಸ ರಾಷ್ಟ್ರಪತಿ ಅಭ್ಯರ್ಥಿಯ ಬಗ್ಗೆ ಅವರ ಹಿನ್ನೆಲೆ ಏನು ಅನ್ನೋದನ್ನ ಇಂದು ನಾವು ಸಂಪೂರ್ಣ ವರದಿ ಮಾಡಿದ್ದೀವಿ. ನೀವು ಅದನ್ನ ಚೆಕ್ ಮಾಡ್ಬೋದು. ಹೊಸ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿರೋ ದ್ರೌಪದಿ ಮುರ್ಮುಗೆ ಇಂದು ಬೆಳಿಗ್ಗೆಯಿಂದಲೇ Z+ ಭದ್ರತೆ ಒದಗಿಸಲಾಗಿದೆ.
-masthmagaa.com
Contact Us for Advertisement