ರಾಷ್ಟ್ರಪತಿ ರಾಮ್​ನಾಥ್ ಉತ್ತರ ಪ್ರದೇಶ ಪ್ರವಾಸ: ರಾಜಕೀಯವೆಂದ ಎಸ್​ಪಿ

masthmagaa.com:

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉತ್ತರ ಪ್ರದೇಶ ಪ್ರವಾಸ ಕೈಗೊಂಡಿದ್ದಾರೆ. ಲಕ್ನೋದಲ್ಲಿರೋ ಬಾಬಾ ಸಾಹೇಬ್ ಅಂಬೇಡ್ಕರ್ ಯುನಿವರ್ಸಿಟಿಯ ಕಾನ್ವೋಕೇಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಭಾನುವಾರ ರೈಲಿನಲ್ಲಿ ಅಯೋಧ್ಯೆಗೆ ಪ್ರಯಾಣಿಸಲಿದ್ದು, ರಾಮಮಂದಿರ ನಿರ್ಮಾಣವಾಗ್ತಿರೋ ಜಾಗಕ್ಕೆ ಹೋಗಲಿದ್ದಾರೆ. ಅಲ್ಲಿ ಪೂಜೆ ಕೂಡ ಮಾಡ್ತಿದ್ದಾರೆ. ಈ ಹಿಂದೆ ಜೂನ್ ತಿಂಗಳಲ್ಲೂ ರಾಮನಾಥ್ ಕೋವಿಂದ್ ಉತ್ತರ ಪ್ರದೇಶ ಪ್ರವಾಸ ಕೈಗೊಂಡಿದ್ರು. ಈ ವೇಳೆಯೂ ರೈಲಿನಲ್ಲಿ ಓಡಾಡಿ ಸುದ್ದಿಯಾಗಿದ್ರು. ಆದ್ರೀಗ ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಬಿಜೆಪಿ ರಾಷ್ಟ್ರಪತಿಯವರನ್ನು ಬಿಜೆಪಿ ನಾಯಕರಂತೆ ಬಿಂಬಿಸ್ತಾ ಇದೆ. 2022ರ ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ಹೀಗೆಲ್ಲಾ ಮಾಡ್ತಿದೆ ಅಂತ ಸಮಾಜವಾದಿ ಪಕ್ಷ ಕುಟುಕಿದೆ. ಆದ್ರೆ ಬಿಜೆಪಿ ಈ ಆರೋಪಗಳನ್ನು ನಿರಾಕರಿಸಿದೆ.

-masthmagaa.com

Contact Us for Advertisement

Leave a Reply