masthmagaa.com:
ಪೊಲೀಸ್ ಕಸ್ಟಡಿಯಲ್ಲಿ ಪ್ರಾಣ ಬಿಟ್ಟ ಕಳ್ಳತನ ಆರೋಪಿಯೊಬ್ಬನ ಮನೆಗೆ ಹೊರಟ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿಯನ್ನು ತಡೆದು, ವಶಕ್ಕೆ ಪಡೆಯಲಾಗಿದೆ. ಆಗ್ರಾ ಮೂಲದ ಅರುಣ್ ವಾಲ್ಮೀಕಿ ಅನ್ನೋ ವ್ಯಕ್ತಿಯನ್ನು 25 ಲಕ್ಷ ರೂಪಾಯಿ ಕಳ್ಳತನ ಆರೋಪದಲ್ಲಿ ಅರೆಸ್ಟ್ ಮಾಡಲಾಗಿತ್ತು. ಆದ್ರೆ ನಂತರದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಪ್ರಾಣ ಬಿಟ್ಟಿದ್ರು. ಸದ್ಯ ಲಕ್ನೋ ಪ್ರವಾಸದಲ್ಲಿರೋ ಪ್ರಿಯಾಂಕಾ ಅರುಣ್ ಕುಟುಂಬಸ್ಥರ ಭೇಟಿಗೆ ಆಗ್ರಾಗೆ ಹೊರಟಿದ್ರು. ಆದ್ರೆ ಪ್ರಿಯಾಂಕ ಅನುಮತಿ ಪಡೆದಿಲ್ಲ ಅನ್ನೋ ಕಾರಣಕ್ಕೆ ಎಂಟ್ರಿ ಪಾಯಿಂಟ್ನಲ್ಲೇ ವಶಕ್ಕೆ ಪಡೆಯಲಾಯ್ತು. ಈ ವೇಳೆ ಹಲವಾರು ಮಹಿಳಾ ಪೊಲೀಸರು ರಸ್ತೆಯಲ್ಲೇ ಪ್ರಿಯಾಂಕಾ ಜೊತೆ ಸೆಲ್ಫಿ ತೆಗೆದುಕೊಂಡ್ರು. ಈ ಬಗ್ಗೆ ಟ್ವೀಟ್ ಮಾಡಿರೋ ಪ್ರಿಯಾಂಕಾ ಗಾಂಧಿ, ಕಸ್ಟಡಿಯಲ್ಲಿ ಪ್ರಾಣ ಬಿಟ್ಟ ಅರುಣ್ ವಾಲ್ಮೀಕಿ ಮನೆಗೆ ನಾನು ಭೇಟಿ ನೀಡೋಕೆ ಯಾಕೆ ಬಿಡಲಿಲ್ಲ.. ಉತ್ತರ ಪ್ರದೇಶ ಸರ್ಕಾರಕ್ಕೆ ಯಾಕೆ ಭಯ..? ಅಂತ ಪ್ರಶ್ನಿಸಿದ್ದಾರೆ. ಈ ಹಿಂದೆ ಲಖೀಂಪುರ್ಖೇರಿ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಸ್ಥರ ಭೇಟಿಗೆ ಹೊರಟಾಗಲೂ ಅವರನ್ನು ವಶಕ್ಕೆ ಪಡೆದು, ನಂತರ ಆರೆಸ್ಟ್ ಮಾಡಲಾಗಿತ್ತು.
-masthmagaa.com
Contact Us for Advertisement