masthmagaa.com:
ರಾಜ್ಯಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಎನ್ನಲಾಗ್ತಿರೋ ರುದ್ರೇಗೌಡ ಪಾಟೀಲ್ನನ್ನ ಸಿಐಡಿ ಅರೆಸ್ಟ್ ಮಾಡಿದೆ. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ತಲೆಮರೆಸಿಕೊಂಡಿದ್ದ ಈತನನ್ನ ಬಂಧಿಸಿ ಕಲಬುರಗಿಗೆ ಕರ್ಕೊಂಡ್ ಬರಲಾಗಿದೆ. ನಿನ್ನೆಯಷ್ಟೇ ಕಲಬುರಗಿ ಜಿಲ್ಲೆ ಅಫ್ಜಲ್ಪುರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಂತೇಶ್ ಪಾಟೀಲ್ನನ್ನ ಬಂಧಿಸಲಾಗಿತ್ತು. ಇಂದು ಆತನ ಸಹೋದರನಾದ ರುದ್ರಗೌಡ ಪಾಟೀಲನನ್ನ ಮೊಬೈಲ್ ಲೊಕೇಷನ್ ಆಧರಿಸಿ ಅರೆಸ್ಟ್ ಮಾಡಲಾಗಿದೆ.
-masthmagaa.com
Contact Us for Advertisement