masthmagaa.com:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಕ್ಷಿಣ ಭಾರತದ ರಾಜ್ಯಗಳಿಗೆ ಭೇಟಿ ನೀಡಿದಾಗ ಅಥವಾ ಹಿಂದಿಯೇತರ ಭಾಷೆ ಮಾತನಾಡುವ ರಾಜ್ಯಗಳಿಗೆ ಭೇಟಿ ನೀಡಿದಾಗ ಅವರ ಭಾಷಣವನ್ನ ಟ್ರಾನ್ಸ್ಲೇಟ್ ಮಾಡೋಕೆ ಅಂತಾನೇ ಕೆಲವರು ಇರ್ತಾರೆ. ರಾಹುಲ್ ಗಾಂಧಿ ಹೇಳಿದ್ದನ್ನ ಜನರಿಗೆ ಸ್ಥಳೀಯ ಭಾಷೆಯಲ್ಲಿ ಹೇಳುವ ಕೆಲಸವನ್ನ ಈ ಟ್ರಾನ್ಸ್ಲೇಟರ್ಗಳು ಮಾಡ್ತಾರೆ. ಕೆಲವೊಂದುಸಲ ರಾಹುಲ್ ಗಾಂಧಿ ಹೇಳಿದ್ದು ಟ್ರಾನ್ಸ್ಲೇಟರ್ಗಳಿಗೆ ಅರ್ಥವಾಗದೆ ಪೇಚಿಗೆ ಸಿಲುಕಿರೋ ಘಟನೆ ಸಾಕಷ್ಟು ಬಾರಿ ನಡೆದಿದೆ. ನಿನ್ನೆ ಇಂಥಾದ್ದೇ ಒಂದು ಘಟನೆ ಪುದುಚೆರಿಯಲ್ಲಿ ನಡೆದಿದೆ. ರಾಹುಲ್ ಗಾಂಧಿ ಪುದುಚೆರಿಗೆ ಭೇಟಿ ನೀಡಿ ಮೀನುಗಾರರನ್ನ ಭೇಟಿಯಾಗಿದ್ರು. ಅವರ ಜೊತೆ ಮಾತನಾಡುವಾಗ ಪುದುಚೆರಿ ಸಿಎಂ ನಾರಾಯಣಸ್ವಾಮಿ ಅವರೇ ರಾಹುಲ್ ಗಾಂಧಿಯ ಟ್ರಾನ್ಸ್ಲೇಟರ್ ರೀತಿ ಕೆಲಸ ಮಾಡಿದ್ರು. ಈ ವೇಳೆ ಮೀನುಗಾರ ಮಹಿಳೆಯೊಬ್ಬಳು ಎದ್ದು ನಿಂತು, ಸಿಎಂ ನಾರಾಯಣಸ್ವಾಮಿ ಈಗೇನೋ ಇಲ್ಲಿದ್ದಾರೆ. ಆದ್ರೆ ನೀರವ್ ಚಂಡಮಾರುತ ಅಪ್ಪಳಿಸಿದ ಸಂದರ್ಭದಲ್ಲಿ ಇಲ್ಲಿಗೆ ಬಂದಿದ್ರಾ? ಅಂತ ತಮಿಳಿನಲ್ಲಿ ಕೇಳಿದ್ರು. ಅಯ್ಯೋ.. ಇದು ನನ್ ಬುಡಕ್ಕೆ ಬಂತಲ್ಲಾ.. ಈಗ ರಾಹುಲ್ ಗಾಂಧಿಗೆ ಏನ್ ಹೇಳೋದು ಅಂತ ಚಡಪಡಿಸಿದ ಸಿಎಂ ನಾರಾಯಣಸ್ವಾಮಿ, ‘ನೀರವ್ ಚಂಡಮಾರುತ ವೇಳೆ ನಾನು ಇಲ್ಲಿಗೆ ಬಂದಿದ್ದೆ. ಜನರಿಗೆ ಪರಿಹಾರ ನೀಡಿದ್ದೆ ಅಂತ ಮಹಿಳೆ ಹೇಳ್ತಿದ್ದಾಳೆ’ ಅಂದುಬಿಟ್ರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಮಹಿಳೆ ನೋಡಿದ್ರೆ ಸಿಎಂ ನಾರಾಯಣಸ್ವಾಮಿ ವಿರುದ್ಧ ರಾಹುಲ್ ಗಾಂಧಿಗೆ ದೂರಿದ್ರೆ.. ಈ ನಾರಾಯಣಸ್ವಾಮಿ ಅದನ್ನೇ ಹೊಗಳಿಕೆ ರೀತಿಯಲ್ಲಿ ಬಿಂಬಿಸಿದ್ರು ಅಂತ ಸಾಕಷ್ಟು ಚರ್ಚೆ ನಡೀತಿದೆ.
-masthmagaa.com
Contact Us for Advertisement