ಅಸ್ಸಾಂನಲ್ಲಿ ಮಂದಿರ ಪ್ರವೇಶಕ್ಕೆ ರಾಹುಲ್‌ ಗಾಂಧಿಗಿಲ್ಲ ಎಂಟ್ರಿ!

masthmagaa.com:

ಕಾಂಗ್ರೆಸ್‌ ಆಯೋಜಿಸಿರೋ ಭಾರತ ಜೋಡೊ ನ್ಯಾಯ ಯಾತ್ರೆಗೆ ಸಾಕಷ್ಟು ಅಡಚಣೆಗಳು ಉಂಟಾಗ್ತಿವೆ. ಇದೀಗ ನಾಯಕ ರಾಹುಲ್‌ ಗಾಂಧಿಗೂ ಭದ್ರತಾ ಪಡೆ ಅಸ್ಸಾಂನಲ್ಲಿ ಘೇರಾವ್‌ ಹಾಕಿದೆ. ರ್ಯಾಲಿ ವೇಳೆ ಆಸ್ಸಾಂನ ಸಂತ ಸಂಕರದೇವರ ಬಟದ್ರವ ಸತ್ರ ದೇವಸ್ಥಾನಕ್ಕೆ ಭೇಟಿ ನೀಡಲು ತೆರಳ್ತಿದ್ದ ರಾಹುಲ್‌ಗೆ ಭದ್ರತಾ ಪಡೆ ಪ್ರವೇಶ ನಿರಾಕರಿಸಿದೆ. ಈ ವೇಳೆ ತಮ್ಮ ಕಾರ್ಯಕರ್ತರೊಂದಿಗೆ ದಾರಿಯಲ್ಲಿ ಕುಳಿತ ರಾಹುಲ್‌, ಕೆಲಕಾಲ ‌ʻರಘುಪತಿ ರಾಘವ ರಾಜಾರಾಮ್‌ʼ ಅಂತ ಭಕ್ತಿ ಗೀತೆ ಹಾಡಿದ್ರು. ಬಳಿಕ “ನಾನ್‌ ದೇವಾಲಯಕ್ಕೆ ಹೋಗಬಾರದಂತ ತಪ್ಪೇನ್ ಮಾಡಿದ್ದೇನೆ? ನಾವ್‌ ಮಂದಿರಕ್ಕೆ ಪ್ರಾರ್ಥನೆ ಸಲ್ಲಿಸಲು ಹೊರಟಿದ್ವಿ ಹೊರತು ಯಾವುದೇ ಗೊಂದಲ ಸೃಷ್ಠಿಸಲು ಅಲ್ಲ” ಅಂತ ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಭಾನುವಾರ ಅಸ್ಸಾಂ ಸಿಎಂ ಹೀಮಂತ್‌ ಬಿಸ್ವ ಸರ್ಮಾ, ರಾಹುಲ್‌ ಗಾಂಧಿಗೆ ರಾಮ ಮಂದಿರ ಉದ್ಘಾಟನೆ ಹಿನ್ನಲೆ ತಮ್ಮ ರ್ಯಾಲಿಯ ಮಾರ್ಗ ಮರು ಪರಿಶೀಲಿಸುವಂತೆ ಒತ್ತಾಯ ಮಾಡಿದ್ರು. ಇದ್ರ ಬೆನ್ನಲ್ಲೇ ರಾಹುಲ್‌ಗೆ ಸೋಮವಾರ ಆಸ್ಸಾಂನ ಮಂದಿರ ಪ್ರವೇಶಕ್ಕೆ ನಿರಾಕರಿಸಲಾಗಿದೆ.

-masthmagaa.com

Contact Us for Advertisement

Leave a Reply