masthmagaa.com:
ವಿ.ಡಿ ಸಾವರ್ಕರ್ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಮೇಲೆ ದೂರು ನೀಡೋಕೆ ಸಾವರ್ಕರ್ ಮೊಮ್ಮಗ ನಿರ್ಧಾರ ಮಾಡಿದ್ದಾರೆ. ವಿಡಿ ಸಾವರ್ಕರ್ ಬ್ರಿಟಿಷರಿಂದ ಪಿಂಚಣಿ ಪಡೆದು ಕಾಂಗ್ರೆಸ್ ವಿರುದ್ಧ ಕೆಲಸ ಮಾಡ್ತಿದ್ರು ಅಂತ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಟೀಕಿಸಿದ್ರು. ಈ ಹಿನ್ನೆಲೆಯಲ್ಲಿ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ರಾಹುಲ್ ಗಾಂಧಿ ವಿರುದ್ಧ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಿರ್ಧರಿಸಿದ್ದೇನೆʼ ಅಂತ ಹೇಳಿದ್ದಾರೆ. ಇತ್ತ ರಾಹುಲ್ ಗಾಂಧಿ ಹೇಳಿಕೆಯನ್ನ ನಾವು ಒಪ್ಪೋದಿಲ್ಲ, ನಮಗೆ ಸಾವರ್ಕರ್ ಮೇಲೆ ಗೌರವವಿದೆ ಅಂತ ಕಾಂಗ್ರೆಸ್-ನ ಮಿತ್ರ ಪಕ್ಷ ಶಿವಸೇನೆಯ ಉದ್ಧವ್ ಠಾಕ್ರೆ ಹೇಳಿದ್ದಾರೆ.) ಸಾವರ್ಕರ್ ಬಗ್ಗೆ ಆರೋಪಿಸಿ ಬೆನ್ನಲ್ಲೇ, ಯಾತ್ರೆ ಟೈಮಲ್ಲಿ ರಾಹುಲ್ರನ್ನ ತಬ್ಬಿಕೊಂಡ ಆದಿತ್ಯ ಠಾಕ್ರೆ ಅವ್ರನ್ನ ಗೋಮೂತ್ರದಿಂದ ಶುದ್ಧಿ ಮಾಡಿ ಅಂತ ಬಿಜೆಪಿ ಹಾಗೂ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವ್ರ ಬಾಳಾಸಾಹೇಬಾಂಚಿ ಶಿವಸೇನಾ ಲೇವಡಿ ಮಾಡಿದೆ.
-masthmagaa.com
Contact Us for Advertisement