masthmagaa.com:
ಕಾಂಗ್ರೆಸ್ನ ಭಾರತ್ ಜೋಡೋ ನ್ಯಾಯ್ ಯಾತ್ರೆ ಇದೀಗ ಮಧ್ಯ ಪ್ರದೇಶಕ್ಕೆ ಎಂಟ್ರಿ ಕೊಟ್ಟಿದೆ. ಆದ್ರೆ ಈ ವೇಳೆ ಎಂಪಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಭಾರೀ ಮುಖಭಂಗವಾಗಿದೆ. ಮಧ್ಯ ಪ್ರದೇಶಕ್ಕೆ ಕಾಲಿಟ್ಟ ರಾಹುಲ್ ಗಾಂಧಿಯವ್ರನ್ನ ʻಮೋದಿ-ಮೋದಿʼ ಅಂತ ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರು ಸ್ವಾಗತ ಮಾಡಿದ್ದಾರೆ. ಅಷ್ಟೇ ಅಲ್ದೇ ರಾಹುಲ್ ಅವ್ರಿಗೆ ಆಲೂಗೆಡ್ಡೆ ಕೂಡ ನೀಡಿರೋದು ವರದಿಯಾಗಿದೆ. ಅಂದ್ಹಾಗೆ ರಾಹುಲ್ ಗಾಂಧಿಯವ್ರು 2017ರಲ್ಲಿ ಚುನಾವಣಾ ಪ್ರಚಾರ ವೇಳೆ ಗುಜರಾತ್ನಲ್ಲಿ ಭಾಷಣ ಮಾಡ್ತಿರೋವಾಗ, ʻಮಷೀನ್ನ ಒಂದ್ಕಡೆಯಿಂದ ಆಲೂಗಡ್ಡೆ ಹಾಕಿದ್ರೆ ಇನ್ನೊಂದ್ಕಡೆಯಿಂದ ಚಿನ್ನ ಬರುತ್ತೆʼ ಅಂತೇಳಿದ್ರು. ಈ ವಿಡಿಯೋ ಆ ಟೈಮ್ಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಅದೇ ವಿಚಾರವಾಗಿ ರಾಹುಲ್ಗೆ ಆಲೂಗಡ್ಡೆ ನೀಡಿ, ಸಾಂಕೇತಿಕವಾಗಿ ಕಾಲೆಳೆದಿದ್ದಾರೆ. ಇನ್ನು ಪಿಎಂ ಮೋದಿ ರೈತರಿಗೆ ಆಲೂಗೆಡ್ಡೆಯಿಂದ ಚಿನ್ನ ತಯಾರಿಸೋ ಬಗ್ಗೆ ಹೇಳಿದ್ದನ್ನ, ರಾಹುಲ್ ಆ ವೇಳೆ ವ್ಯಂಗ್ಯ ಮಾಡಿದ್ರೂ ಅನ್ನೋ ವಾದ ಕೂಡ ಇದೆ.
-masthmagaa.com
Contact Us for Advertisement