masthmagaa.com:
ಲಡಾಖ್ ಜನರ ಭೂಮಿಯನ್ನ ಚೀನಾ ಕಬಳಿಸಿದೆ ಅಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಆರೋಪಿಸಿದ್ದಾರೆ. ಚೀನಾ ಇಲ್ಲಿನ ಭೂಮಿಯನ್ನು ವಶಪಡಿಸಿಕೊಂಡಿದ್ದು, ಜನರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಚೀನಾದ ಪಡೆಗಳು ಭಾರತದ ಭೂಪ್ರದೇಶಕ್ಕೆ ಪ್ರವೇಶಿಸಿವೆ ಅಂತ ಜನರೇ ಹೇಳುತ್ತಿದ್ದಾರೆ. ಆದ್ರೆ ಪ್ರಧಾನಿಯವರು ಮಾತ್ರ ಒಂದಿಂಚು ಭೂಮಿಯನ್ನು ಕಳೆದುಕೊಂಡಿಲ್ಲ ಅಂತ ಹೇಳಿದ್ದಾರೆ. ಆದರೆ, ಇದು ನಿಜವಲ್ಲ… ಲಡಾಖ್ನಲ್ಲಿನ ಪರಿಸ್ಥಿತಿ ಅವರು ಹೇಳಿದಂತಿಲ್ಲ. ಕೇಂದ್ರಾಡಳಿತ ಪ್ರದೇಶದ ಜನರು ನಿರುದ್ಯೋಗ ಮತ್ತು ಹಣದುಬ್ಬರ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅಂತ ರಾಹುಲ್ ಹೇಳಿದ್ದಾರೆ. ಇದೇ ವೇಳೆ ಚೀನಾ ಭಾರತದ ಭೂಮಿಯನ್ನ ವಶಪಡಿಸಿಕೊಂಡಿದೆ ಅನ್ನೋದಕ್ಕೆ ಸಾಕ್ಷಿಗಳಿದ್ದು, ಅದನ್ನ ಪ್ರಧಾನಿ ಹಾಗೂ ರಕ್ಷಣಾ ಸಚಿವರು ಒಪ್ಪೊಕೊಳ್ಳದಿದ್ರೆ ಅದು ಭಾರತ ಮಾತೆಗೆ ಮಾಡಿದ ಅನ್ಯಾಯವಾಗುತ್ತದೆ ಅಂತ ರಾಹುಲ್ ವಾಗ್ದಾಳಿ ಮಾಡಿದ್ದಾರೆ.
-masthmagaa.com
Contact Us for Advertisement