TMC ಜೊತೆ ಸೀಟು ಬಿಕ್ಕಟ್ಟಿನ ಮಧ್ಯೆ ಬಂಗಾಳಕ್ಕೆ ಕಾಲಿಟ್ಟ ʻಕೈʼ ಯಾತ್ರೆ!

masthmagaa.com:

ರಾಹುಲ್‌ ಗಾಂಧಿ ನಡೆಸ್ತಿರೋ ಭಾರತ ಜೊಡೋ ನ್ಯಾಯ ಯಾತ್ರೆ 12 ದಿನಕ್ಕೆ ಕಾಲಿಟಿದ್ದು ಈಗ ಪಶ್ಚಿಮ ಬಂಗಾಳಕ್ಕೆ ತಲುಪಿದೆ. ಸೀಟು ಹಂಚಿಕೆ ವಿಚಾರದಲ್ಲಿ ಮಮತಾರ TMC ಜೊತೆ ಭಿನ್ನಮತ ಇರೋ ಹೊತ್ತಲ್ಲೇ ಈ ಯಾತ್ರೆ ವೆಸ್ಟ್‌ ಬೆಂಗಾಲ್‌ಗೆ ಕಾಲಿಟ್ಟಿರೋದು ಮಹತ್ವ ಪಡ್ಕೋತಿದೆ. ಇನ್ನು ಇತ್ತೀಚೆಗಷ್ಟೇ ಮಮತಾ ಬ್ಯಾನರ್ಜಿ ʻʻಕಾಂಗ್ರೆಸ್‌ ನಮ್ಮನ್ನ ರ‍್ಯಾಲಿಗೆ ಇನ್ವೈಟ್‌ ಮಾಡಿಲ್ಲ. ಇದು ಮೈತ್ರಿ ಧರ್ಮನಾʼʼ ಅಂತ ಪ್ರಶ್ನೆ ಮಾಡಿದ್ರು. ಇದಕ್ಕೆ ಈಗ ಕಾಂಗ್ರೆಸ್‌ ತೇಪೆ ಹಚ್ಚೋ ಕೆಲಸ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ನಡೆಯೋ ಯಾತ್ರೆಗೆ ಮಮತಾ ಬ್ಯಾನರ್ಜಿ ಭಾಗವಹಿಸಬೇಕು. ಇದನ್ನೇ ಕಾಂಗ್ರೆಸ್ಸೂ ಬಯಸುತ್ತೆ ಅಂತ ಕಾಂಗ್ರೆಸ್‌ ನಾಯಕ ಜೈ ರಾಮ್‌ ರಮೇಶ್‌ ಹೇಳಿದ್ದಾರೆ. ಇತ್ತ ಅಸ್ಸಾಂನಲ್ಲಿ ಈ ರ್ಯಾಲಿ ವೇಳೆ ಕೈ ಕಾರ್ಯಕರ್ತರು ಬ್ಯಾರಿಕೇಡ್‌ ಮುರಿದ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಮೇಲಿನ ಕೇಸ್‌ನ್ನ ಹಿಮಂತ್‌ ಬಿಸ್ವ ಸರ್ಮಾ ಸರ್ಕಾರ ಅಸ್ಸಾಂ ಸಿಐಡಿಗೆ ವರ್ಗಾಯಿಸಿದೆ.

-masthmagaa.com

Contact Us for Advertisement

Leave a Reply