masthmagaa.com:
ಬಿಜೆಪಿಗರು ಸಂವಿಧಾನವನ್ನೇ ಫಿನಿಷ್ ಮಾಡೋದಾಗಿ ಹೇಳಿದ್ದಾರೆ ಅಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ದೇಶದಲ್ಲಿ ಸಂವಿಧಾನ ಉಳಿಸಬೇಕು ಅಂದ್ರೆ ಕಾಂಗ್ರೆಸ್ಗೆ ವೋಟ್ ಹಾಕಿ, ಆರೆಸ್ಸೆಸ್ ಮತ್ತು ಬಿಜೆಪಿ ಇಬ್ರೂ ಸಂವಿಧಾನ ಫಿನಿಷ್ ಮಾಡೋಕೆ ನೋಡ್ತಿದ್ದಾರೆ ಅಂತೇಳಿದ್ದಾರೆ. ಅತ್ತ ಮಾಜಿ ಕಾಂಗ್ರೆಸ್ ನಾಯಕ ಪ್ರಮೋದ್ ಕೃಷ್ಣನ್ ರಾಹುಲ್ ಗಾಂಧಿ ಮೇಲೆ ಇನ್ನೊಂದು ಆರೋಪ ಮಾಡಿದ್ದು, ರಾಹುಲ್ ಗಾಂಧಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ರಾಮಮಂದಿರ ನಿರ್ಧಾರವನ್ನ ಚೇಂಜ್ ಮಾಡ್ತೀವಿ ಅಂತೇಳಿದ್ದಾರೆ ಅಂತ ಅವರು ಹೇಳಿದ್ದಾರೆ.
-masthmagaa.com
Contact Us for Advertisement