ಏಷ್ಯಾಕಪ್‌ ಟಿ20 ಟೂರ್ನಿಗೆ ಭಾರತ ತಂಡ ಪ್ರಕಟ!

masthmagaa.com:

ಈ ತಿಂಗಳ 30ರಿಂದ ಶುರುವಾಗುವ ಏಷ್ಯಾಕಪ್‌ಗೆ ಕೊನೆಗೂ ಬಿಸಿಸಿಐ ಆಯ್ಕೆ ಸಮಿತಿ ಭಾರತ ತಂಡವನ್ನ ಅನೌನ್ಸ್‌ ಮಾಡಿದೆ. 17 ಆಟಗಾರರ ಈ ತಂಡದಲ್ಲಿ ಇಷ್ಟು ದಿನ ಗಾಯದಿಂದ ತಂಡದಿಂದ ಹೊರಗಿದ್ದ ವೇಗಿ ಜಸ್ಪ್ರೀತ್‌ ಬುಮ್ರಾ, ಕೆ.ಎಲ್‌ ರಾಹುಲ್‌, ಶ್ರೇಯಸ್‌ ಅಯ್ಯರ್‌ ಹಾಗು ಕನ್ನಡಿಗ ಪ್ರಸಿದ್ದ ಕೃಷ್ಣ ಸ್ಥಾನ ಪಡೆದಿದ್ದಾರೆ. ಜೊತೆಗೆ ಟಿ20ಯಲ್ಲಿ ಭರವಸೆ ಮೂಡಿಸಿರುವ ಯುವ ಪ್ರತಿಭೆ ತಿಲಕ್‌ ವರ್ಮಾ ಕೂಡ ಅವಕಾಶ ಸಿಕ್ಕಿದೆ. ಆದ್ರೆ ರಿಸ್ಟ್‌ ಸ್ಪಿನ್ನರ್‌ ಯಜುವೇಂದ್ರ ಚಹಾಲ್‌, ಸಂಜು ಸ್ಯಾಮ್ಸನ್‌ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸಂಜು ಸ್ಯಾಮ್ಸನ್‌ರನ್ನ ಬ್ಯಾಕ್‌ಅಪ್‌ ಆಯ್ಕೆಯಾಗಿ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಉಳಿದಂತೆ ಸೂರ್ಯಕುಮಾರ್‌ ಯಾದವ್‌, ಅಕ್ಸರ್‌ ಪಟೇಲ್‌, ಶಾರ್ದುಲ್‌ ಠಾಕೂರ್‌, ಇಶಾನ್‌ ಕಿಶನ್‌ ತಂಡದಲ್ಲಿದ್ದಾರೆ. ಏಷ್ಯಾ ಕಪ್ ಆಗಸ್ಟ್ 30 ರಿಂದ ಸೆಪ್ಟೆಂಬರ್ 17ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ‌ ಹೈಬ್ರಿಡ್‌ ಮಾದರಿಯಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳು ಭಾಗವಹಿಸುತ್ತಿವೆ. ಇನ್ನು ಏಷ್ಯಾಕಪ್‌ ಬೆನ್ನಲ್ಲೇ ವಿಶ್ವಕಪ್‌ ನಡೆಯೋದ್ರಿಂದ ಬಹುತೇಕ ಇದೇ ತಂಡ ಅಲ್ಲು ಕೂಡ ಕಾಣಿಸಿಕೊಳ್ಳಲಿದೆ. ಸೆಪ್ಟೆಂಬರ್‌ 5ರಂದು 15 ಆಟಗಾರರ ಪಟ್ಟಿಯನ್ನ ಫೈನಲ್‌ ಮಾಡೋಕೆ ಡೆಡ್‌ಲೈನ್‌ ಇದೆ. ಹೀಗಾಗಿ ಏಷ್ಯಾಕಪ್ ಪರ್ಫಾರ್ಮೆನ್ಸ್‌ನ್ನ ನೋಡ್ಕೊಂಡು ಇದ್ರಲ್ಲೇ ಇಬ್ಬರನ್ನ ಕೈಬಿಡುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply