masthmagaa.com:
ಕಾಂಗ್ರೆಸ್ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರೋ ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ನಾಮಿನೇಷನ್ಗೂ ಮುನ್ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಅಂತ ಮೂಲಗಳು ತಿಳಿಸಿವೆ. ಇದಕ್ಕಾಗಿ ಇವತ್ತು ರಾಜಸ್ತಾನ ಕಾಂಗ್ರೆಸ್ CLP ಮೀಟಿಂಗ್ ಅಂದ್ರೆ ಶಾಸಕಾಂಗ ಸಭೆಯನ್ನ ಕರೆದಿದೆ. ಈ ಸಭೆಯಲ್ಲಿ ಗೆಹಲೋಟ್ ಒಲ್ಲದ ಮನಸ್ಸಲ್ಲಿ ರಾಜಿನಾಮೆ ನಿರ್ಧಾರ ಪ್ರಕಟಿಸಬಹುದು ಅಂತ ಹೇಳಲಾಗಿದೆ. ಇನ್ನು ಮುಂದಿನ ಸಿಎಂ ಯಾರು ಅನ್ನೋದು ಔಪಚಾರಿಕವಾದ್ರು ಕೂಡ ಇದನ್ನ ಕಾಂಗ್ರೆಸ್ನ ಹಂಗಾಮಿ ನಾಯಕಿ ಸೋನಿಯಾ ಗಾಂಧಿಗೆ ಡಿಸೈಡ್ ಮಾಡಲು ಬಿಡ್ತಾರೆ ಎನ್ನಲಾಗಿದೆ. ಇನ್ನು ಅತ್ತ ಗೆಹ್ಲೋಟ್ಗೆ ಪ್ರಬಲ ಎದುರಾಳಿಯಂತೆ ಬಿಂಬಿತವಾಗ್ತಿರೋ ಕಾಂಗ್ರೆಸ್ನ ರೆಬೆಲ್ ನಾಯಕ, ಸಂಸದ ಶಶಿ ತರೂರ್ ಇದೇ 30ನೇ ತಾರೀಖು ನಾಮಪತ್ರ ಸಲ್ಲಿಕೆ ಮಾಡ್ಬೋದು ಅಂತ ಮೂಲಗಳು ತಿಳಿಸಿವೆ.
-masthmagaa.com
Contact Us for Advertisement