ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗೆ ಯಾವುದೇ ರೀತಿಯ ತೊಂದರೆ ಆಗೋದಿಲ್ಲ. ಒಂದು ವೇಳೆ ಅವರಿಗೆ ಏನಾದ್ರು ತೊಂದ್ರೆ ಆದ್ರೆ ಮೊಟ್ಟ ಮೊದಲಿಗೆ ನಾನೇ ದನಿಯೆತ್ತುತ್ತೇನೆ ಅಂತ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ. ಚೆನ್ನೈನಲ್ಲಿ ಮಾತನಾಡಿ ಸಿಎಎ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಅವರು, ಎನ್ಪಿಆರ್ ಕೂಡ ಅಗತ್ಯವಾಗಿದೆ ಅಂತ ಹೇಳಿದ್ದಾರೆ. ಈ ಕಾಯ್ದೆಗಳಿಂದ ಮುಸ್ಲಿಮರಿಗೆ ಏನೂ ತೊಂದರೆಯಾಗಲ್ಲ. ದೇಶ ವಿಭಜನೆಗೂ ಮೊದಲಿನಿಂದ ಈ ದೇಶದಲ್ಲಿರೋ ಮುಸ್ಲಿಮರನ್ನು ದೇಶದಿಂದ ಹೊರಹಾಕಲು ಹೇಗೆ ಸಾಧ್ಯ..?. ಸಿಎಎ ಕಾಯ್ದೆಯಿಂದ ಭಾರತೀಯರಿಗೆ ಯಾವುದೇ ರೀತಿಯ ಸಮಸ್ಯೆಯಾಗೋದಿಲ್ಲ ಎಂದು ಈಗಾಗಲೇ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆದ್ರೆ ರಾಜಕೀಯ ಪಕ್ಷಗಳು ತಮ್ಮ ಸ್ವಯಂ ಹಿತಾಸಕ್ತಿಗಾಗಿ ಜನರನ್ನು ಪ್ರಚೋದಿಸುತ್ತಿವೆ ಎಂದು ಹೇಳಿದ್ದಾರೆ.
Contact Us for Advertisement2020-02-05