ವೆಲ್ಲೋರ್: ರಾಜೀವ್ ಗಾಂಧಿ ಹತ್ಯೆ ಕೇಸ್ ಅಪರಾಧಿ ನಳಿನಿ ಶ್ರೀಹರನ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಶುರು ಮಾಡಿದ್ದಾಳೆ. ವೆಲ್ಲೋರ್ ಮಹಿಳಾ ಜೈಲಿನಲ್ಲಿರೋ ನಳಿನಿ, ಪತ್ರ ಬರೆದು ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದ್ದಾಳೆ.
ತಾನು ಮತ್ತು ತನ್ನ ಪತಿ ಮುರುಗನ್ ಕಳೆದ 28 ವರ್ಷಗಳಿಂದ ಜೈಲಿನಲ್ಲಿದ್ದು, ಈಗ ಬಿಡುಗಡೆ ಮಾಡುವ ಸಮಯ ಬಂದಿದೆ. ಈಗಾಗಲೇ ಈ ತಮ್ಮ ಬಿಡುಗಡೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾಳೆ.
ಜುಲೈ 25ರಂದು ನಳಿನಿಯನ್ನು 30 ದಿನಗಳ ಅವಧಿಗಾಗಿ ಬಿಡುಗಡೆ ಮಾಡಲಾಗಿತ್ತು. 2016ರಲ್ಲೂ ನಳಿನಿ ತಂದೆ ಸಾವನ್ನಪ್ಪಿದ್ದರಿಂದ 12 ಗಂಟೆಗಳ ಕಾಲ ಜಾಮೀನು ನೀಡಲಾಗಿತ್ತು. ನಳಿನಿಗೆ ಜೈಲಿನಲ್ಲೇ ಮಗು ಕೂಡ ಜನಿಸಿದ್ದು, ಆಕೆ ಈಗ ಲಂಡನ್ನಲ್ಲಿ ವೈದ್ಯಕೀಯ ತರಬೇತಿ ಪಡೆಯುತ್ತಿದ್ದಾಳೆ. ನಳಿನಿ ಸೇರಿದಂತೆ 6 ಮಂದಿ ರಾಜೀವ್ ಗಾಂಧಿ ಹತ್ಯೆ ಕೇಸ್ನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ಧಾರೆ.
Contact Us for Advertisement