masthmagaa.com:
ಭಾರತೀಯ ಕ್ರೀಡಾಲೋಕದ ಅತ್ಯುನ್ನತ ಪ್ರಶಸ್ತಿಯಾದ ಖೇಲ್ ರತ್ನಗೆ ಹಾಕಿ ದಂತಕತೆ ಮೇಜರ್ ಧ್ಯಾನ್ ಚಂದ್ ಹೆಸರು ಇಡಲಾಗಿದೆ. ಇದನ್ನ ಈವರೆಗೆ ರಾಜೀವ್ ಗಾಂಧಿ ಖೇಲ್ ರತ್ನ ಅವಾರ್ಡ್ ಅಂತ ಕರೆಯಲಾಗ್ತಿತ್ತು. ಈ ಬಗ್ಗೆ ಟ್ವೀಟ್ ಮಾಡಿರೋ ಪ್ರಧಾನಿ ಮೋದಿ, ಮೇಜರ್ ಧ್ಯಾನ್ಚಂದ್ ದೇಶಕ್ಕೆ ಹೆಮ್ಮೆ ಮತ್ತು ಗೌರವವನ್ನು ತಂದುಕೊಟ್ಟ ಕ್ರೀಡಾಪಟು. ಹೀಗಾಗಿ ದೇಶದ ಕ್ರೀಡಾಲೋಕದ ಅತ್ಯುನ್ನತ ಪ್ರಶಸ್ತಿಗೆ ಅವರ ಹೆಸರೇ ಇಡೋದು ಸೂಕ್ತ.. ಈ ಬಗ್ಗೆ ಇಡೀ ದೇಶದಾದ್ಯಂತ ಹಲವು ಬೇಡಿಕೆಗಳು ಬಂದಿದ್ವು. ಹೀಗಾಗಿ ಅವರೆಲ್ಲರ ಭಾವನೆಗಳಿಗೆ ಬೆಲೆ ಕೊಡ್ತಾ ಇನ್ಮುಂದೆ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ಚಂದ್ ಪ್ರಶಸ್ತಿ ಅಂತ ಕರೆಯಲಾಗುತ್ತೆ ಅಂತ ಘೋಷಿಸಿದ್ದಾರೆ. ನಿನ್ನೆಯಷ್ಟೇ ಭಾರತೀಯ ಪುರುಷರ ಹಾಕಿ ತಂಡ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿತ್ತು. ಈ ಮೂಲಕ ಹಾಕಿಯಲ್ಲಿದ್ದ 41 ವರ್ಷಗಳ ಪದಕದ ದಾಹವನ್ನು ತೀರಿಸಿತ್ತು. ಅದ್ರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಹೆಜ್ಜೆ ಇಟ್ಟಿದೆ. ಅಂದಹಾಗೆ ಈ ಮೇಜರ್ ಧ್ಯಾನ್ಚಂದ್ ಹಾಕಿಯಲ್ಲಿ ದಂತಕತೆಯಾಗಿದ್ರು. ಇವರ ನೇತೃತ್ವದಲ್ಲಿ ಭಾರತ 1928ರಿಂದ 1936ರವರೆಗೆ ಮೂರು ಚಿನ್ನದ ಪದಕಗಳನ್ನು ಗೆದ್ದುಕೊಂಡಿತ್ತು. 1956ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೂಡ ನೀಡಿ ಗೌರವಿಸಲಾಗಿತ್ತು. ಇವರ ಜನ್ಮದಿನವಾದ ಆಗಸ್ಟ್ 29ನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತೆ. 1905ರಲ್ಲಿ ಉತ್ತರ ಪ್ರದೇಶದಲ್ಲಿ ಜನಿಸಿದ್ದ ಧ್ಯಾನ್ಚಂದ್ 1979ರ ಡಿಸೆಂಬರ್ 3ರಂದು ವಿಧಿವಶರಾಗಿದ್ರು.
ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆ ರೆಸ್ಪಾನ್ಸ್ ಬಂದಿದ್ದು ಎಲ್ಲಾ ಸ್ವಾಗತಿಸಿದ್ದಾರೆ. ಸ್ಫೋರ್ಟ್ಸ್ ಅವಾರ್ಡ್ಗಳು ಕ್ರೀಡಾಪಟುಗಳ ಹೆಸರನ್ನೇ ಹೊಂದಿರಬೇಕು. ರಾಜಕಾರಣಿಗಳದ್ದಲ್ಲ ಅಂತ ಹೇಳಿದ್ಧಾರೆ. ಇದೇ ವೇಳೆ ವಿಪಕ್ಷ ನಾಯಕರು, ಕ್ರೀಡಾಪಟುಗಳು ಸೇರಿದಂತೆ ಹಲವರು ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂಗೂ ಕ್ರೀಡಾಪಟುಗಳ ಹೆಸರೇ ಇಡಬೇಕು ಅಂತ ಒತ್ತಾಯಿಸಿದ್ದಾರೆ.
-masthmagaa.com
Contact Us for Advertisement