ಪುನೀತ್​​​​ಗೆ ಹೃದಯಾಘಾತ ಆದಾಗ ವೈದ್ಯರು ನಿರ್ಲಕ್ಷಿಸಿದ್ರಾ..?

masthmagaa.com:

ಪುನೀತ್‌ ರಾಜ್​​​ಕುಮಾರ್‌ಗೆ ಪ್ರಾಥಮಿಕ ಟ್ರೀಟ್‌ಮೆಂಟ್‌ ಕೊಟ್ಟ ರಮಣ ರಾವ್‌ ಅವ್ರು ಚಿಕಿತ್ಸೆಯನ್ನ ಸರಿಯಾದ ಸಮಯಕ್ಕೆ ಸರಿಯಾಗಿ ಕೊಟ್ಟಿಲ್ಲ ನಿರ್ಲಕ್ಷ್ಯ ಮಾಡಿದ್ರು. ಹೀಗಾಗಿ ಅವ್ರ ವಿರುದ್ಧ ತನಿಖೆ ನಡೆಸ್ಬೇಕು ಎಂಬಂತಹ ಮಾತುಗಳು, ಆರೋಪಗಳು ಕೇಳಿ ಬಂದಿದ್ವು. ಈ ನಿಟ್ಟಿನಲ್ಲಿ ಇದೀಗ ಡಾ.ರಮಣ ರಾವ್‌ ಅವರ ಸದಾಶಿವ ನಗರದಲ್ಲಿ ಇರುವ ಮನೆಗೆ ಪೊಲೀಸ್‌ ಭದ್ರತೆ ನೀಡಲಾಗಿದೆ. ಇನ್ನು ಈ ಆರೋಪಗಳಿಗೆ ಸ್ವತಃ ಪ್ರತಿಕ್ರಿಯಿಸಿರುವ ಡಾ ರಮಣ ರಾವ್‌ ನಮ್ಮದು ಸಣ್ಣ ಕ್ಲಿನಿಕ್‌, ಇಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲು ಸಾಧ್ಯ ಇಲ್ಲ. ಹಾಗಾಗಿ ಹೃದಯದಲ್ಲಿ ಏನಾದ್ರು ಸಮಸ್ಯೆ ಇದ್ರೆ ಬಾಯಲ್ಲಿ ಇಟ್ಟುಕೊಳ್ಳಲು ಮಾತ್ರೆ ಕೊಟ್ಟಿದ್ದೆ. ನನ್ನ ಮಗನಿಗೆ ಈ ಪರಿಸ್ಥಿತಿ ಎದುರಾಗಿದ್ರೆ ಏನು ಮಾಡ್ತ ಇದ್ನೋ ಅದನ್ನೇ ನಾನು ಪುನೀತ್‌ ಅವರಿಗೂ ಮಾಡಿದ್ದೇನೆ. ನನ್ನ ಕಡೆಯಿಂದ ಯಾವುದೇ ತಪ್ಪಾಗಿಲ್ಲ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply