ನಾನು ಎಲ್ಲೇ ಕುಳಿತಿದ್ದರೂ ಕ್ಷೇತ್ರದ ಜನತೆ ನನ್ನ ಕೈಬಿಡಲ್ಲ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯ ಗೋಕಾಕ್ನಲ್ಲಿ ಮಾತನಾಡಿದ ಅವರು, ನಮ್ಮ ಕ್ಷೇತ್ರದಿಂದ ನಾವೇ ಸ್ಪರ್ಧಿಸುತ್ತೇವೆ. ಆದ್ರೆ ಯಾವ ಪಕ್ಷದಿಂದ ಸ್ಪರ್ಧಿಸೋದು ಅನ್ನೋ ಬಗ್ಗೆ ನಿರ್ಧರಿಸಿಲ್ಲ. ಶೀಘ್ರದಲ್ಲೇ ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೇವೆ. ನಾನು ಎಲ್ಲೇ ಕುಳಿತಿದ್ದರೂ ಕ್ಷೇತ್ರ ಜನ ನನ್ನ ಗೆಲ್ಲಿಸುತ್ತಾರೆ. ನನ್ನ ಮೇಲೆ ಕ್ಷೇತ್ರದ ಜನ ಅಷ್ಟೊಂದು ಪ್ರೀತಿ ಹೊಂದಿದ್ದಾರೆ. ಕ್ಷೇತ್ರದ ಜನ ಯಾವಾಗ ನನ್ನ ಕೈಬಿಡುತ್ತಾರೋ ಅವತ್ತು ನಾನು ಝೀರೋ ಆಗುತ್ತೇನೆ ಅಂದ್ರು. ಅಲ್ಲದೆ ನಾನು ಪ್ರವಾಹದ ವೇಳೆ ಕೆಲಸ ಮಾಡಿದ್ದೇನೆ. ಆದ್ರೆ ಸತೀಶ್ ಜಾರಕಿಹೊಳಿ ಅವರ ಫೋಟೋ ಹಾಕಿಕೊಂಡು ಪ್ರಚಾರ ಪಡೀತಿದ್ದಾರೆ. ಸತೀಶ್ಗೆ ಜನರೇ ಬುದ್ಧಿ ಕಲಿಸುತ್ತಾರೆ ಅಂತ ಕಿಡಿಕಾರಿದ್ರು. ಇನ್ನು ಲಖನ್ ಸ್ಪರ್ಧೆ ಬಗ್ಗೆ ಮಾತನಾಡಿ, ಲಖನ್ ಸ್ಪರ್ಧಿಸಿದ್ರೆ ನಾನೇ ತುಂಬಾ ಖುಷಿ ಪಡುತ್ತೇನೆ. ಶಾಸಕನಾದರೆ ನನಗೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ ಎಂದಿದ್ದಾರೆ.
Contact Us for Advertisement2019-09-22