masthmagaa.com:
‘ವೀಕೆಂಡ್ ವಿತ್ ರಮೇಶ್’ ಸೀಸನ್ 5 ಶೋ ಮಾರ್ಚ್ 25 ಪ್ರಸಾರವಾಯಿತು. ಈ ಸೀಸನ್ನ ಮೊದಲ ಅತಿಥಿ ರಮ್ಯಾರ ಲೈಫ್ ಜರ್ನಿಯನ್ನ ಸುಂದರವಾಗಿ ಭಾವುಕ ಚೌಕಟ್ಟಿನಲ್ಲಿ ಕಟ್ಟಿಕೊಟ್ಟರು ನಿರೂಪಕ ರಮೇಶ್ ಅರವಿಂದ್. ಬಾಲ್ಯ, ಶಾಲೆ, ಗೆಳೆಯರು, ಶಿಕ್ಷಕರು, ಹವ್ಯಾಸ, ಆಟ ಎಲ್ಲದರ ಸವಿನೆನಪನ್ನು ಹಂಚಿಕೊಂಡ ರಮ್ಯಾ, ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರೀತಿ, ಅಲ್ಲಿ ಸಿಕ್ಕಿದ ಗೆಳೆಯರು, ಸಿನಿಮಾಗಳ ನೆನಪುಗಳನ್ನು ಮೆಲುಕಿ ಹಾಕಿದರು. ಜೊತೆಗೆ ಎಲ್ಲಿಯೂ ಹಂಚಿಕೊಳ್ಳದ ಕೆಲವು ಅಪರೂಪದ ಸಂಗತಿಗಳನ್ನು ರಮ್ಯಾ ಹಂಚಿಕೊಂಡರು. ರಮ್ಯಾರಿಗೆ ಚಿತ್ರಾನ್ನ ಹಾಗೂ ಜಿಲೇಬಿ ಮೇಲಿರುವ ಪ್ರೀತಿಯನ್ನು ಹಾಗೂ ಅವರು ಹೇಗೆ ಚಿಪ್ಸ್ ಅನ್ನು ಸ್ಪೂನ್ ನಂತೆ ಬಳಸಿ ಚಿತ್ರಾನ್ನ ತಿನ್ನುತ್ತಾರೆಂಬುದು ಅವರ ಸಹೋದರಿಯಿಂದ ತಿಳಿದುಬಂತು. ಇನ್ನು, ತಾವು ಊಟಿಯಲ್ಲಿ ಓದಿದ ಬೋರ್ಡಿಂಗ್ ಶಾಲೆ, ಅಲ್ಲಿನ ಶಿಕ್ಷಕರು, ಅಲ್ಲಿನ ಗೆಳೆಯರ ನೆನಪುಗಳನ್ನೆಲ್ಲ ಹೇಳಿಕೊಂಡರು. ರಮ್ಯಾರನ್ನು ಕಾಣಲು ಅವರ ಬಾಲ್ಯದ ಗೆಳತಿಯರಿಬ್ಬರೂ ಬಂದಿದ್ದರು. ರಮ್ಯಾ ಹೇಗೆ ಕತ್ತಲಾಗುತ್ತಲೆ ದೆವ್ವದ ಕತೆಗಳನ್ನು ಹೇಳಿ ಎಲ್ಲರನ್ನೂ ಹೆದರಿಸುತ್ತಿದ್ದರು. ಹೇಗೆ ಇಷ್ಟವಾಗದ ಹಾಲು, ರಾಗಿ ಗಂಜಿಯನ್ನು ಯಾರಿಗೂ ಕಾಣದಂತೆ ಮಾಯ ಮಾಡುತ್ತಿದ್ದರು ಎಂಬುದನ್ನ ಹೇಳಿ ಹಾಸ್ಯ ಮಾಡಿದರು. ರಮ್ಯಾ ಬಹಳವಾಗಿ ಹೆದರುವ ಅವರ ಮ್ಯಾಥ್ಸ್ ಟೀಚರ್ ಶೋಗೆ ಬಂದು ಶೋನಲ್ಲಿಯೂ ಗಣಿತದ ಲೆಕ್ಕ ಬಿಡಿಸಲು ಹೇಳಿದರು ರಮ್ಯಾ ಲೆಕ್ಕ ಬಿಡಿಸಿ ಪಾಸ್ ಆದರು. ನಂತರ ರಮ್ಯಾ ಮೊದಲ ಸಿನಿಮಾಕ್ಕೆ ಹೇಗೆ ಸೆಲೇಕ್ಟ್ ಆದರು ಎಂಬುದನ್ನು ಹೇಳಿದರು.
ರಾಘಣ್ಣ ಅವರು ನೋಡಿದ ಕೂಡಲೇ ಸಿನಿಮಾದಲ್ಲಿ ನಟಿಸುವಂತೆ ಕೇಳಿದ್ದು. ಆದರೆ ಅಪ್ಪು ಸಿನಿಮಾದ ಅವಕಾಶ ತಮಗೆ ತಪ್ಪಿ ನಂತರ ಅಭಿ ಸಿನಿಮಾದ ಅವಕಾಶ ಸಿಕ್ಕಿತು. ಅಣ್ಣಾವ್ರವನ್ನು ಭೇಟಿಯಾಗಿದ್ದು, ಪಾರ್ವತಮ್ಮನವರು ರಮ್ಯಾ ಎಂದು ಹೆಸರಿಟ್ಟ ಕ್ಷಣ. ಮೊದಲ ಸಿನಿಮಾದಲ್ಲಿ ಅಪ್ಪು ಅವರು ಮಾಡಿದ ಸಹಾಯ. ಮೊದಲ ಚೆಕ್ ಅನ್ನು ಅಪ್ಪುವಿಂದ ಪಡೆದುಕೊಂಡಿದ್ದು ಎಲ್ಲವನ್ನೂ ರಮ್ಯ ನೆನಪಿಸಿಕೊಂಡರು. ರಾಘಣ್ಣ ಹಾಗೂ ಶಿವಣ್ಣ ಅವರುಗಳು ವಿಡಿಯೋ ಸಂದೇಶ ಕಳಿಸಿ, ರಮ್ಯಾಗೆ ಶುಭ ಹಾರೈಸಿದರು. ‘ನಮ್ಮ ಸಂಸ್ಥೆಯಿಂದ ನೀವು ಬೆಳೆಯಲಿಲ್ಲ. ನಿಮ್ಮ ಪ್ರತಿಭೆಯಿಂದ ಬೆಳೆದಿರಿ’ ಎಂದು ರಾಘಣ್ಣ ಹೇಳಿದರು.
ನಂತರ ಅಭಿ ಸಿನಿಮಾದ ಸಹಾಯಕ ನಿರ್ದೇಶಕ ಹಾಗೂ ರಮ್ಯಾರ ಅರಸು, ಆಕಾಶ್ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು ಬಂದು ರಮ್ಯಾರ ಕೋಪದ ಬಗ್ಗೆ ಹೇಳಿದರು. ‘ನನಗೆ ರಕ್ಷಿತಾಗೆ ಕಾಂಪಿಟೇಶನ್ ಹುಚ್ಚು ಹಬ್ಬಿಸಿದ್ದೆ ಇವರು’ ಎಂದು ಮಹೇಶ್ರ ಕಾಲೆಳೆದರು ರಮ್ಯಾ. ಸಿನಿಮಾಗಳ ಮಾತುಕತೆ ನಡುವೆ ಅಪ್ಪುವನ್ನು ಸ್ಮರಿಸಿದ ರಮ್ಯಾ, ಅಪ್ಪುವಿನಿಂದ ತಾವು ಕಲಿತ ವಿಷಯಗಳನ್ನು ಹಾಗೂ ಅವರೊಟ್ಟಿಗೆ ತಾವು ಕಳೆದ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಂಡರು. ಅಪ್ಪುಅವರನ್ನು ನೆನದು ಭಾವುಕರಾದರು.
ನಂತರ ರಮೇಶ್ ಅರವಿಂದ್ ಎಕ್ಸ್ಕ್ಯೂಸ್ ಮೀ ಸಿನಿಮಾದ ನೆನಪು ಮಾಡಿದರು. ಎಕ್ಸ್ಕ್ಯೂಸ್ ಮೀ ಸಿನಿಮಾದ ನಿರ್ಮಾಪಕರು, ಆ ಸಿನಿಮಾದ ಇಬ್ಬರು ನಾಯಕರಾದ ಸುನಿಲ್ ರಾವ್ ಹಾಗೂ ಅಜಯ್ ಅವರುಗಳು ರಮ್ಯಾ ಕುರಿತಾಗಿ ಮಾತನಾಡಿದರು. ಆ ನಂತರ ಸಂಜು ವೆಡ್ಸ್ ಗೀತ ಸಿನಿಮಾದ ಬಗ್ಗೆ ಮಾತಿಗೆಳೆದ ರಮೇಶ್ ಅರವಿಂದ್, ಆ ಸಿನಿಮಾದ ನಿರ್ದೇಶಕ ನಾಗಶೇಖರ್ ವಿಡಿಯೋ ಪ್ರಸಾರ ಮಾಡಿದರು. ಆದರೆ ನಾಗಶೇಖರ್ ಹಾಗೂ ನಾಯಕ ಕಿಟ್ಟಿ ಇಬ್ಬರೂ ವೇದಿಕೆ ಬಂದು ರಮ್ಯಾಗೆ ಸರ್ಪ್ರೈಸ್ ನೀಡಿದರು. ಸಂಜು ವೆಡ್ಸ್ ಗೀತ ಸಿನಿಮಾದ ಕ್ಲಾಪ್ ಅನ್ನು ನಾಗಶೇಖರ್, ರಮ್ಯಾಗೆ ಉಡುಗೊರೆಯಾಗಿ ನೀಡಿದರು. ಸಂಜು ವೆಡ್ಸ್ ಗೀತಾ ಸಿನಿಮಾದ ದೃಶ್ಯವೊಂದನ್ನು ರಮ್ಯಾ-ಕಿಟ್ಟಿ ನಟಿಸಿ ತೋರಿಸಿದರು. ನಗು, ಭಾವುಕತೆ, ನೆನಪು, ಪ್ರೀತಿ, ಸಾರ್ಥಕತ ಭಾವಗಳಿಂದ ತುಂಬಿತ್ತು ಮೊದಲ ಎಪಿಸೋಡ್. ಇನ್ನೂ ಪ್ರಸಾರವಾಗಲಿರುವ ಎರಡನೇ ಎಪಿಸೋಡ್ನಲ್ಲಿ ರಮ್ಯಾರ ಲೈಫ್ ಜರ್ನಿಯ ಇನ್ನೊಂದು ಅಧ್ಯಾಯ ಬಿಚ್ಚಿಕೊಳ್ಳಲಿದೆ.
-masthmagaa.com
Contact Us for Advertisement