masthmagaa.com:
ಆಜಾನ್ ವೇಳೆ ಹನುಮಾನ್ ಚಾಲೀಸಾದ ಸ್ಪೀಕರ್ ಹಚ್ಚಿದ್ದ ವ್ಯಾಪಾರಿ ಮೇಲೆ ಹಲ್ಲೆ ಖಂಡಿಸಿ ವ್ಯಾಪಾರಿಗಳು ಭಾರಿ ಪ್ರತಿಭಟನೆ ನಡೆಸಿದ್ದಾರೆ. ನಗರತ್ ಪೇಟೆಯಲ್ಲಿ ಘಟನೆ ನಡೆದ ಜಾಗದಲ್ಲೆ ಪ್ರತಿಭಟನೆ ನಡೆಸ್ತಿದ್ದ ವ್ಯಾಪಾರಿಗಳಿಗೆ ಬಿಜೆಪಿ ಹಾಗೂ ಹಿಂದೂ ಪರ ಕಾರ್ಯಕರ್ತರು ಪ್ರತಿಭಟನೆಗೆ ಸಾಥ್ ನೀಡಿ ಸ್ಥಳಕ್ಕೆ ಜಮಾಯಿಸಿದ್ರು ಈ ವೇಳೆ ರಸ್ತೆಯುದ್ದಕ್ಕೂ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರಾದ ಸಂಸದ ಪಿ.ಸಿ. ಮೋಹನ್, ಶಾಸಕ ಸುರೇಶ್ ಕುಮಾರ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವ್ರನ್ನ ಪೋಲಿಸರು ವಶಕ್ಕೆ ಪಡೆದ್ರು. ಹಾಗೂ ಚುನಾವಣಾ ನೀತಿ ಸಂಹಿತೆ ಜಾರಿಯಾರೊದ್ರಿಂದ ಪ್ರತಿಭಟನೆ ನಡೆಸದಂತೆ ಖಾಕಿ ಮನವಿ ಮಾಡಿದೆ. ಅಂದ್ಹಾಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ದುಷ್ಕರ್ಮಿಗಳನ್ನ ಪೋಲಿಸರು ಈಗಾಗ್ಲೇ ಬಂಧಿಸಿದ್ದಾರೆ.
-masthmagaa.com
Contact Us for Advertisement