ʻಕೃಷ್ಣ ಜನ್ಮ ಭೂಮಿಯಲ್ಲಿ ನಿರ್ಮಿಸಿರೊ ಮಸೀದಿ ತೆರವುಗೊಳಿಸಿʼ ಅರ್ಜಿ ವಿಚಾರಣೆ ಸ್ವೀಕಾರ!

masthmagaa.com:

ಮಥುರಾದ ʻಕೃಷ್ಣ ಜನ್ಮ ಭೂಮಿಯಲ್ಲಿ ನಿರ್ಮಿಸಿರೋ ಮಸೀದಿ ತೆರವುಗೊಳಿಸಿʼ ಅಂತ ಸಲ್ಲಿಸಿದ್ದ ಅರ್ಜಿಯನ್ನ ಉತ್ತರಪ್ರದೇಶದ ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿದೆ. ವಿಚಾರಣೆಯ ದಿನಾಂಕ ಇನ್ನಷ್ಟೇ ನಿಗದಿ ಆಗಬೇಕಿದೆ. 17ನೇ ಶತಮಾನದ ಶಾಹಿ ಈದ್ಗಾ ಮಸೀದಿಯನ್ನ ಕತ್ರಾ ಕೇಶವ್‌ ದೇವ್‌ ದೇವಸ್ಥಾನದಿಂದ ತೆರವು ಮಾಡಬೇಕು. ಇದು ಕೃಷ್ಣನ ಜನ್ಮಭೂಮಿ, ಇಲ್ಲಿ ನಾವು ಪೂಜೆ ಮಾಡ್ಬೇಕು ಅಂತ ಒತ್ತಾಯಿಸಿ ಹಿಂದೂ ಸಂಘಟನೆಗಳು ಮಥುರಾ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ವು. ಈಗ ಕೋರ್ಟ್‌ ಪ್ರಕರಣವನ್ನ ಆಲಿಸೋಕೆ ಒಪ್ಪಿದೆ.

 

-masthmagaa.com

 

Contact Us for Advertisement

Leave a Reply