masthmagaa.com:
ಕೊಡಗು ಜಿಲ್ಲೆಯಲ್ಲಿ ಈ ವರ್ಷ ಮಳೆಗಿಂತ ಹೆಚ್ಚು ಶಬ್ದ ಮಾಡಿದ್ದು ಭೂಕಂಪ ಮತ್ತು ಭೂ ಕುಸಿತದ ಪ್ರಕರಣಗಳು. ಜಿಲ್ಲೆಯಲ್ಲಿ ಒಂದಾದರ ಮೇಲೆ ಒಂದರಂತೆ ಇಂತಹ ಕೇಸ್ ಗಳು ವರದಿಯಾಗ್ತಿರೋದ್ರ ಹಿನ್ನೆಲೆಯಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಕೊಡಗು ಜಿಲ್ಲೆಯಲ್ಲಿ ಪದೇ ಪದೇ ಇಂತಹ ಪಾಕೃತಿಕ ವಿಕೋಪಗಳು ನಡೀತಿವೆ. ಈ ಕುರಿತು ನಿಖರ ಕಾರಣ ಪತ್ತೆ ಹಚ್ಚೋಕೆ ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಬೇಕು. ಜೊತೆಗೆ ಇದಕ್ಕಾಗಿ ವಿಶೇಷ ತಂಡ ರಚನೆಗೆ ಆದೇಶ ನೀಡಬೇಕು ಅಂತೇಳಿ PLI ಸಲ್ಲಿಕೆಯಾಗಿತ್ತು. ಹೀಗಾಗಿ ಸರ್ಕಾರ ಈ ಬಗ್ಗೆ ಮೂರು ವಾರಗಳೊಳಗೆ ಪ್ರತಿಕ್ರಿಯೆ ನೀಡ್ಬೇಕು ಅಂತ ಕೋರ್ಟ್ ನೋಟಿಸ್ ನೀಡಿದೆ.
-masthmagaa.com
Contact Us for Advertisement