masthmagaa.com:
ಗುಜರಾತ್ನಲ್ಲಿ ಟೆಸ್ಲಾ ಕಾರು ತಯಾರಿಕಾ ಘಟಕ ನಿರ್ಮಾಣ ಮಾಡೋ ವಿಚಾರವಾಗಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬಿಜೆಪಿ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಟೆಸ್ಲಾಂ ನಿರ್ಮಾಣ ಘಟಕ ಗುಜರಾತ್ಗೆ ಹೋಗುವಂತೆ ಬಿಜೆಪಿ ಉದ್ದೇಶಪೂರ್ವಕವಾಗಿ ಯೋಜನೆ ರೂಪಿಸಿದೆ. ಜೊತೆಗೆ ಐಫೋನ್ ತಯಾರಿಕ ಕಂಪನಿ, ತೈವಾನ್ ಮೂಲದ ಪಾಕ್ಸ್ಕಾನ್ ಗುಜರಾತ್ಗೆ ಬರುವಂತೆ ನೋಡಿಕೊಳ್ಳಲಾಗಿದೆ ಅಂತ ಆರೋಪಿಸಿದ್ದಾರೆ. ಅಲ್ದೇ ತೆಲಂಗಾಣದಲ್ಲಿ ಕೇಂದ್ರ ಸರ್ಕಾರ ತನ್ನ ಯಾವ ಯೋಜನೆಗಳನ್ನು ಜಾರಿ ಮಾಡ್ತಿಲ್ಲ. ಪ್ರಧಾನಿ ಮೋದಿ ದಕ್ಷಿಣ ಭಾರತದವ್ರನ್ನ ಸೆಕೆಂಡ್ ಕ್ಲಾಸ್ ಜನರ ಥರ ಟ್ರೀಟ್ ಮಾಡ್ತಾರೆ ಅಂತ ರೇವಂತ್ ಆರೋಪಿಸಿದ್ದಾರೆ.
-masthmagaa.com
Contact Us for Advertisement