masthmagaa.com:
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ನಿನ್ನೆ ಸರ್ಕಾರದ ಕಡೆಯಿಂದ ಅಧಿಕಾರಿಗಳು ಕೊರೋನಾ ಪರೀಕ್ಷೆ ಮಾಡಲು ಮುಂದಾಗಿದ್ರು. ಆದ್ರೆ ಯಾವ್ದೇ ಸ್ಯಾಂಪಲ್ ಕೊಡದೆ, ಅಧಿಕಾರಿಯನ್ನ ವಾಪಸ್ ಕಳಿಸಿದ್ರು ಡಿಕೆ ಶಿವಕುಮಾರ್. ನಾನು ಫಿಟ್ ಅಂಡ್ ಫೈನ್ ಆಗಿದ್ದೀನಿ. ಬೇಕಿದ್ರೆ ಗೃಹ ಸಚಿವರನ್ನ ಕೂಡ ಹೊತ್ಕೊಂಡು ಹೋಗ್ತೀನಿ. ಅಷ್ಟು ಗಟ್ಟಿಯಾಗಿದ್ದೀನಿ. ಆದ್ರೆ ಯಾವ್ದೇ ಟೆಸ್ಟ್ ಮಾಡಿಸಿಕೊಳ್ಳಲ್ಲ ಅಂತ ಡಿಕೆಶಿ ಗರಂ ಆದ್ರು. ಇಂಟರೆಸ್ಟಿಂಗ್ ಅಂದ್ರೆ ಡಿಕೆ ಶಿವಕುಮಾರ್ಗೆ ಕೊರೋನಾ ಪರೀಕ್ಷೆ ಮಾಡಲು ಬಂದಿದ್ದ ಅಧಿಕಾರಿಗೇ ಇವತ್ತು ಕೊರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಕೊರೋನಾ ಸೋಂಕಿತರನ್ನ ನನ್ನ ಬಳಿ ಕಳಿಸಿ, ನನ್ನನ್ನ ಅವರ ಪ್ರಾಥಮಿಕ ಸಂಪರ್ಕಿತ ಅಂತ ಮಾಡಲು ಮತ್ತು ಈ ಮೂಲಕ ಪಾದಯಾತ್ರೆಯನ್ನ ನಿಲ್ಲಿಸಲು ಸರ್ಕಾರ ಷಡ್ಯಂತ್ರ ನಡೆಸುತ್ತಿದೆ ಅಂತ ಡಿಕೆಶಿ ಆರೋಪ ಮಾಡಿದ್ದಾರೆ. ಕೊರೋನಾ ಪರೀಕ್ಷೆ ಮಾಡಲು ಬಿಡದ ಡಿಕೆಶಿ ವಿರುದ್ಧ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ. ಡಿಕೆ ಶಿವಕುಮಾರ್ ಕೆಡಿ ಶಿವಕುಮಾರ್ ಅಂತ ಪ್ರೂವ್ ಮಾಡ್ತಿದ್ದಾರೆ ಅಂತ ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ.
-masthmagaa.com
Contact Us for Advertisement