ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಾ..? ಇಲ್ವಾ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಯಾಕಂದ್ರೆ ಇವತ್ತು ಪುನಃ ಶಿವಸೇನೆ ನಾಯಕ ಸಂಜಯ್ ರಾವತ್ ಬಿಜೆಪಿಗೆ ಚುನಾವಣೆಗೂ ಮುನ್ನ ಮಾಡಿಕೊಂಡಿದ್ದ 50-50 ಫಾರ್ಮುಲಾವನ್ನು ನೆನೆಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಬಿಜೆಪಿ 50-50 ಫಾರ್ಮುಲಾ ಫಾಲೋ ಮಾಡಬೇಕು. ಅಂದ್ರೆ ಕ್ಯಾಬಿನೆಟ್ನಲ್ಲಿ ಸರಿಸಮಾನವಾಗಿ ಸ್ಥಾನಮಾನ ನೀಡಬೇಕು ಅಂದ್ರು. ಅಲ್ಲದೆ ರಾಜಕೀಯದಲ್ಲಿ ಹಲವಾರು ದಾರಿಗಳಿರುತ್ತವೆ ಅನ್ನೋ ಮೂಲಕ ಎನ್ಸಿಪಿ ಜೊತೆ ಹೋಗೋ ಸೂಚನೆ ಕೂಡ ಕೊಟ್ಟಿದ್ದಾರೆ.
ಹರಿಯಾಣದಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿರಲಿಲ್ಲ. ಆದ್ರೂ ಅವರು ಅವರಿಗೆ ವಿರುದ್ಧವಾದ ಸಂಘಟನೆ ಜೊತೆ ಸೇರಿ ಸರ್ಕಾರ ರಚಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ತಡವಾಗುತ್ತಿದೆ ಅಂದ್ರೆ ಅದರಲ್ಲಿ ನಮ್ಮದೇನೂ ತಪ್ಪಿಲ್ಲ. ನಾವು ಈವರೆಗೆ ಎನ್ಸಿಪಿ ಬೆಂಬಲ ಪಡೆಯೋ ಬಗ್ಗೆ ಯೋಚಿಸಿಲ್ಲ. ಆದ್ರೆ ರಾಜಕೀಯದಲ್ಲಿ ಎಲ್ಲವೂ ಸಾಧ್ಯ ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಸಂಜಯ್ ರಾವತ್, ನಮಗೆ ಅಧಿಕಾರದ ದಾಹವಿಲ್ಲ. ಹೇಳಿದಂತೆ ನಡೆದುಕೊಳ್ಳಬೇಕು ಅಷ್ಟೆ. ಅದರಂತೆ ಕ್ಯಾಬಿನೆಟ್ನಲ್ಲಿ ಸರಿಯಾದ ಸ್ಥಾನಮಾನ ಸಿಗಬೇಕು. ನಮಗೆ ಯಾಕೆ ಎರಡೂವರೆ ವರ್ಷಗಳ ಕಾಲ ಸಿಎಂ ಹುದ್ದೆ ನೀಡಬಾರದು ಅಂತ ಪ್ರಶ್ನಿಸಿದ್ರು.
Contact Us for Advertisement