ಸ್ವಾತಂತ್ರ್ಯೋತ್ಸವದ ನಡುವೆಯೇ ದೇಶದ ಮೇಲೆ ಉಗ್ರರ ಕರಿನೆರಳು!

masthmagaa.com:

ನಾಡಿದ್ದು ಆಗಸ್ಟ್ 15ಕ್ಕೆ ಭಾರತಕ್ಕೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಆದ್ರೆ ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದಂತೇ ಅದರ ಮೇಲೆ ಉಗ್ರರ ಕರಿನೆರಳು ಬಿದ್ದಿದೆ. ಜಮ್ಮು ಕಾಶ್ಮೀರದ ಪೂಂಚ್​ನಲ್ಲಿ ಇವತ್ತು ಬಿಎಸ್​ಎಫ್​ ಯೋಧರು ಕಾರ್ಯಾಚರಣೆ ನಡೆಸಿ ಉಗ್ರರ ಅಡುಗುದಾಣವನ್ನ ಪತ್ತೆಹಚ್ಚಿದ್ದಾರೆ. ಜೊತೆಗೆ ಅದರಲ್ಲಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ಸೀಜ್ ಮಾಡಿದ್ದಾರೆ. ಅತ್ತ ಪಂಜಾಬ್​ನ ಅಮೃತ್​ಸರದ ಗ್ರಾಮವೊಂದರಲ್ಲಿ ಪೊಲೀಸರು ಟಿಫಿನ್​ ಬಾಕ್ಸ್​ ಸ್ಫೋಟಕವನ್ನ ಸೀಜ್​ ಮಾಡಿದ್ದಾರೆ. ಟಿಫಿನ್ ಬಾಕ್ಸ್​ ಒಳಗೆ ಸುಮಾರು ಮೂರು ಕೆಜಿಯಷ್ಟು ಸುಧಾರಿತ ಸ್ಫೋಟಕ ಸಾಧನವನ್ನ ಫಿಕ್ಸ್ ಮಾಡಲಾಗಿತ್ತು. ಇದಲ್ಲದೆ ಐದು ಗ್ರನೇಡ್​, ಮದ್ದುಗುಂಡುಗಳು ಸಿಕ್ಕಿವೆ. ಇವೆಲ್ಲವನ್ನ ಗಡಿಯಾಚೆಗಿನಿಂದ ಭಾರತಕ್ಕೆ ಡ್ರೋನ್​ ಮೂಲಕ ಸಾಗಿಸಲಾಗಿದೆ ಅಂತ ಪಂಜಾಬ್ ಪೊಲೀಸರು ಹೇಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಉಗ್ರ ಕೃತ್ಯ ನಡೆಸಲು ಉಗ್ರರು ಸಿದ್ಧತೆ ನಡೆಸುತ್ತಿದ್ದಾರೆ ಅಂತಾನೂ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಪಂಜಾಬ್​​ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಚೆಕಿಂಗ್​ ಹೆಚ್ಚಿಸಲಾಗಿದೆ. ಇನ್ನು ಜಮ್ಮು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ಲಾಲ್​ ಚೌಕ್​ನಲ್ಲಿ ಬಿಜೆಪಿ ಕಿಸಾನ್ ಮೋರ್ಚಾ ಅಧ್ಯಕ್ಷ ಗುಲಾಮ್​ ರಸೂಲ್ ದರ್ ಮತ್ತು ಆತನ ಪತ್ನಿಯನ್ನ ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ. ಮತ್ತೊಂದುಕಡೆ ಜಮ್ಮು ಕಾಶ್ಮೀರದ ಕಿಶ್ತ್​ವಾರ್​ಲ್ಲಿ ಹಿಜ್ಬುಲ್​ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ.

-masthmagaa.com

Contact Us for Advertisement

Leave a Reply