masthmagaa.com:
ಏಕನಾಥ್ ಶಿಂಧೆಯವರನ್ನ ಸಿಎಂ ಸ್ಥಾನಕ್ಕೆ ನೇಮಕ ಮಾಡಿರೋದ್ರ ಕುರಿತು ಸುಪ್ರೀಂ ಕೋರ್ಟ್ಗೆ ಇಂದು ಶಿವಸೇನೆಯ ಉದ್ದವ್ ಠಾಕ್ರೆ ಬಣದಿಂದ ಹೊಸ ಅರ್ಜಿ ಸಲ್ಲಿಕೆಯಾಗಿದೆ. ಹಿರಿಯ ವಕೀಲ ದೇವದತ್ ಕಾಮತ್ ನೇತೃತ್ವದಲ್ಲಿ ಈ ಹೊಸ ಅರ್ಜಿ ಸಲ್ಲಿಸಲಾಗಿದ್ದು ಈಗಿರೋ ಹಲವು ಅರ್ಜಿಗಳ ಜೊತೆಗೆ ಇದಕ್ಕೂ ಕೂಡ ಸೇರಿಸಿ ಏಕನಾಥ್ರನ್ನ ಸಿಎಂ ಮಾಡಿರೋದನ್ನ ನಾವು ಪ್ರಶ್ನೆ ಮಾಡ್ತಿದ್ದೇವೆ ಅಂತ ಹೇಳಿದ್ದಾರೆ. ಇನ್ನು ಈ ಅರ್ಜಿ ಜುಲೈ 11 ರಂದು ಈ ವಿಚಾರಣೆ ಬರಲಿದೆ ಅಂತ ಸುಪ್ರೀಂ ಕೋರ್ಟ್ ಹೇಳಿಕೆ ನೀಡಿದೆ. ಇತ್ತ ಶಿಂಧೆ ಬಣದ ವಿರುದ್ದ ಮತ್ತೆ ಬೆಂಕಿಯುಗುಳಿರೋ ಮಾಜಿ ಸಿಎಂ ಉದ್ದವ್ ಠಾಕ್ರೆ ಶಿವಸೇನೆ ಪಕ್ಷದ ಗುರುತನ್ನ ಯಾರೋಬ್ಬರೂ ಕೂಡ ತಗೆದುಕೊಂಡು ಹೋಗೋಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.
-masthmagaa.com
Contact Us for Advertisement