masthmagaa.com:
ಇನ್ನು ಅತ್ತ ಕುಸ್ತಿಗಳ ಪಟುಗಳ ನಾಡು ಹರ್ಯಾಣದಲ್ಲಿ ಪೊಲಿಟಿಕಲ್ ಹೈಡ್ರಾಮಾ ಶುರುವಾಗಿದೆ. ಸದ್ಯ 80 ಸ್ಥಾನಗಳನ್ನ ಹೊಂದಿರೊ ಹರ್ಯಾಣ ವಿಧಾನಸಭೆಯಲ್ಲಿ ಮೂವರು ಪಕ್ಷೇತರ ಶಾಸಕರು, ಆಡಳಿತರೂಢ ಬಿಜೆಪಿಗೆ ನೀಡಿದ್ದ ಬೆಂಬಲ ಹಿಂಪಡೆದು ಕಾಂಗ್ರೆಸ್ಗೆ ಜೈ ಅಂದಿದ್ರು. ಹೀಗಾಗಿ ಬಿಜೆಪಿ ಸರ್ಕಾರ ಬಹುಮತ ಕಳ್ಕೊಳ್ಳೋ ಸಾಧ್ಯತೆ ಇದೆ ಎನ್ನಲಾಗಿತ್ತು. ಆದ್ರೆ ಈಗ ನಮ್ಮ ಜೊತೆಗೆ ಅನೇಕ ಶಾಸಕರು ಸಂಪರ್ಕದಲ್ಲಿದ್ದಾರೆ. ಇದು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮೇಲೆ ಯಾವ ಪರಿಣಾಮವನ್ನೂ ಬೀರಲ್ಲ ಅಂತ ಹರ್ಯಾಣದ ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.
-masthmagaa.com
Contact Us for Advertisement