ಆರ್​​ಎಸ್​ಎಸ್​ನ್ನು ತಾಲಿಬಾನಿಗಳಿಗೆ ಹೋಲಿಸಿದ ಕವಿ ವಿರುದ್ಧ ಶಿವಸೇನೆ ಕೆಂಡ!

masthmagaa.com:

ಆರ್​​ಎಸ್​ಎಸ್​​ನ್ನು ತಾಲಿಬಾನಿಗಳಿಗೆ ಹೋಲಿಸಿದ್ದ ಕವಿ ಜಾವೇದ್ ಅಖ್ತರ್​​​ಗೆ ಶಿವಸೇನೆ ತಿರುಗೇಟು ಕೊಟ್ಟಿದೆ. ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಲೇಖನ ಪ್ರಕಟವಾಗಿದ್ದು, ಆರ್​ಎಸ್​​ಎಸ್​ ಆಗಲೀ.. ಶಿವಸೇನೆ ಆಗಲೀ ಧಾರ್ಮಿಕ ಉನ್ಮಾದತೆಯನ್ನು ಯಾವತ್ತೂ ಬೆಂಬಲಿಸಿಲ್ಲ. ನಾವು ಹಿಂದೂ ರಾಷ್ಟ್ರದ ಪ್ರತಿಪಾದಕರಷ್ಟೆ ಅಂತ ಹೇಳಿದೆ. ಪಾಕಿಸ್ತಾನ, ಚೀನಾ ತಾಲಿಬಾನಿಗಳಿಗೆ ಬೆಂಬಲ ಸೂಚಿಸಿದ್ದಾರೆ. ಯಾಕಂದ್ರೆ ಈ ದೇಶಗಳಲ್ಲಿ ಮಾನವ ಹಕ್ಕು, ಪ್ರಜಾಪ್ರಭುತ್ವ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಯಾವುದೇ ಬೆಲೆ ಇಲ್ಲ. ಆದ್ರೆ ಹಿಂದುಸ್ತಾನದ ಮೈಂಡ್​ಸೆಟ್ ಅದಲ್ಲ. ನಾವು ತುಂಬಾ ಸಹಿಷ್ಣುಗಳಾಗಿದೀವಿ ಆದ್ರೆ ಪ್ರಜಾಪ್ರಭುತ್ವದ ಸೋಗಿನಲ್ಲಿ ಕೆಲವರು ಸರ್ವಾಧಿಕಾರ ತರಲು ಪ್ರಯತ್ನಿಸುತ್ತಲೂ ಇರಬಹುದು. ಆದ್ರೆ ಇಲ್ಲಿ ಮಿತಿಗಳಿದ್ದು, ಆರ್​ಎಸ್​​ಎಸ್​​ನ್ನು ತಾಲಿಬಾನ್​​ಗೆ ಹೋಲಿಸೋದು ಸರಿಯಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply