masthmagaa.com:
ಪುನೀತ್ ಅಂತ್ಯಕ್ರಿಯೆ ಮುಗಿದ ಬಳಿಕ ಮಾತನಾಡಿದ ಶಿವರಾಜ್ಕುಮಾರ್, ಸಹೋದರನ ನಿಧನದಿಂದ ತುಂಬಾ ನೋವಾಗಿದೆ. ಆತ ಇಲ್ಲ ಅನ್ನೋದನ್ನ ಅರಗಿಸಿಕೊಳ್ಳೋಕೇ ಆಗ್ತಿಲ್ಲ. ಇಲ್ಲೇ ಎಲ್ಲೋ ಹೋಗಿದ್ದಾನೆ, ಬರ್ತಾನೆ ಅನಿಸ್ತಿದೆ. ಒಂದ್ರೀತಿ ನನ್ನ ಮಗುನೇ ಕಳೆದುಕೊಂಡಂತೆ ಆಗ್ತಿದೆ. ಆದ್ರೂ ಜೀವನ ಮುಂದೆ ಹೋಗ್ಬೇಕಾಗಿದೆ. ಅವರ ಕುಟುಂಬದ ಜೊತೆ ನಾವೆಲ್ರೂ ಇದ್ದೀವಿ. ಅಪ್ಪು ನನ್ನಲ್ಲಿ ಇದ್ದಾನೆ, ರಾಘುನಲ್ಲಿದ್ದಾನೆ, ಇಂಡಸ್ಟ್ರಿಯಲ್ಲಿದ್ದಾನೆ, ನಿರ್ಮಾಪಕರು, ನಿರ್ದೇಶಕರು, ಅಭಿಮಾನಿಗಳು, ನಮ್ಮೆಲ್ಲರ ಹೃದಯದಲ್ಲಿದ್ದಾನೆ ಅಂತ ಹೇಳಿದ್ರು. ಇನ್ನು ಇದೆಲ್ಲಾ ಶಾಂತಿಯುತವಾಗಿ, ಅಚ್ಚುಕಟ್ಟಾಗಿ ನಡೆಯಲು ಸಹಕರಿಸಿದ ರಾಜ್ಯ ಸರ್ಕಾರ, ಪೊಲೀಸ್ ಡಿಪಾರ್ಟ್ಮೆಂಟ್, ಅಭಿಮಾನಿಗಳು, ಎಲ್ಲರಿಗೂ ಧನ್ಯವಾದ ಅಂದ್ರು. ಜೊತೆಗೆ ಅಭಿಮಾನಿಗಳು ಕೂಡ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಕುಟುಂಬಕ್ಕೆ ನೀವು ಮುಖ್ಯ. ಅಪ್ಪು ಇದ್ದಿದ್ರೆ ಇದನ್ನ ಇಷ್ಟಪಡ್ತಿರಲಿಲ್ಲ. ದಯವಿಟ್ಟು ಅಂತಹ ಯಾವುದೇ ನಿರ್ಧಾರ ತಗೋಬೇಡಿ. ದುಃಖ, ನೋವನ್ನ ನುಂಕ್ಕೊಂಡು ಮುಂದಕ್ಕೆ ಹೋಗೋಣ ಅಂತ ಶಿವಣ್ಣ ಹೇಳಿದ್ರು.
-masthmagaa.com
Contact Us for Advertisement