ನನ್ನ ತಮ್ಮನಿಗೆ ಇನ್ನೊಂದು 10 ನಿಮಿಷ ಟೈಂ ಕೊಡ್ಬೇಕಿತ್ತು: ಶಿವಣ್ಣ

masthmagaa.com:

ಪುನೀತ್​ ರಾಜ್​​ಕುಮಾರ್​ಗೆ ಹೃದಯ ಸಮಸ್ಯೆ ಏನಾದ್ರೂ ಇತ್ತಾ ಅಥವಾ ಅದಕ್ಕೆ ಸಂಬಂಧಿಸಿದಂತೆ ಮೊದಲೇ ಏನಾದ್ರೂ ಸೂಚನೆ ಸಿಕ್ಕಿತ್ತಾ ಅನ್ನೋ ಅನುಮಾನ ಸಾಕಷ್ಟು ಜನರಿಗಿದೆ. ನಿಧನಕ್ಕೂ ಒಂದೆರಡು ದಿನ ಹಿಂದೆ ಭಜರಂಗಿ 2 ಸಿನಿಮಾದ ಪ್ರಿ ರಿಲೀಸ್​​ ಈವೆಂಟ್​​ನಲ್ಲಿ ಭಾಗಿಯಾಗಿದ್ದ ಪುನೀತ್​ ಸ್ವಲ್ಪ ಡಲ್ ಆದಂತೆ​ ಕಂಡಿತ್ತು. ಈ ಬಗ್ಗೆ ಇವತ್ತು ಮಾತನಾಡಿರೋ ನಟ ಶಿವರಾಜ್​ಕುಮಾರ್​, ಯಾಕೋ ಪ್ರಿ ರಿಲೀಸ್​ ಈವೆಂಟ್​​ನಲ್ಲಿ ಅಪ್ಪು ಸ್ವಲ್ಪ ಡಲ್ ಆದಂತೆ ಕಾಣ್ತಿದೆ ಅಂತ ಗೀತಾ ಹೇಳ್ತಿದ್ದಳು. ಬಟ್​ ನಂಗೇನು ಅನಿಸಿರಲಿಲ್ಲ. ಸಾಮಾನ್ಯವಾಗಿ ಶೂಟ್ ಮುಗಿಸಿ ಬಂದ್ರೆ ಟೈರ್ಡ್​ ಆಗಿ ಕಾಣ್ತೀವಿ. ಅಪ್ಪು ಕೂಡ ಟೈರ್ಡ್ ಆಗಿರಬೇಕು ಅಂದುಕೊಂಡಿದ್ದೆ. ಬಟ್​​ ನನ್ ಜೊತೆ​ ಕೊನೇದಾಗಿ ಡಾನ್ಸ್ ಮಾಡಿದ ದಿನ ಆತ ಫಿಸಿಯೋ ಮಾಡಿ ಬಂದಿದ್ದ. ಅದರಿಂದ ಸ್ವಲ್ಪ ಟೈರ್ಡ್ ಆಗಿರಬೇಕು. ಅದ್​ಬಿಟ್ರೆ ಮತ್ತೇನು ಇಲ್ಲ. ಯಾವುದೇ ಸೂಚನೇನೆ ಇಲ್ಲ. ಹಾಗೇನಾದ್ರೂ ಇದ್ದಿದ್ರೆ ಬಿಡಕ್ಕಾಗ್ತಿತ್ತಾ? ತೋರಿಸ್ತಿದ್ದ. ನಾನಾದ್ರೂ ಚೆಕ್​ ಮಾಡ್ಸು ಅಂತ ಹೇಳ್ತಿದ್ದೆ. ಬಟ್​ ಅಪ್ಪು ವಿಚಾರದಲ್ಲಿ ಸೂಚನೇನೆ ಇರ್ಲಿಲ್ಲ. ಅವನು ಫಿಟ್​ ಅಂಡ್ ಫೈನ್​ ಆಗಿದ್ದ. ಇನ್ಮೇಲೆ ಫಿಟ್​ ಇರೋರು ಸೇರಿದಂತೆ ಎಲ್ರಿಗೂ ಆರೋಗ್ಯದ ಬಗ್ಗೆ ಡೌಟ್​ ಬರುತ್ತೆ ಅಂತ ಶಿವಣ್ಣ​ ಹೇಳಿದ್ರು. ಇನ್ನು ಪುನೀತ್​ ಅವರಿಗೆ ಚೆಸ್ಟ್ ಪೇನ್ ಕಾಣಿಸಿಕೊಂಡಾಗ ವಿಕ್ರಂ ಆಸ್ಪತ್ರೆಯನ್ನ ರೆಫರ್ ಮಾಡೋ ಬದಲು ಹತ್ತಿರದಲ್ಲೇ ಇದ್ದ ರಾಮಯ್ಯ ಅಥವಾ ಬೇರೆ ಆಸ್ಪತ್ರೆಗೆ ರೆಫರ್ ಮಾಡಬಹುದಿತ್ತಲ್ವಾ ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಆ ಮೂಮೆಂಟ್​​ನಲ್ಲಿ ಫ್ಯಾಮಿಲಿ ಡಾಕ್ಟರಿಗೂ ಏನೂ ಅನಿಸಿರಲಿಲ್ಲ. ಇದರಲ್ಲಿ ಏನೂ ಹೇಳಕ್ಕಾಗಲ್ಲ. ವಿಧಿ ಇನ್ನೊಂದು ಹತ್ತು ನಿಮಿಷ ಟೈಂ ಕೊಡ್ಬೇಕಿತ್ತು. ಎಲ್ಲರಿಗೂ ಅವಕಾಶ ಕೊಡ್ತಾನೆ. ಯಾಕೆ ನನ್ನ ತಮ್ಮನಿಗೆ ಕೊಡಲಿಲ್ಲ. ಅಂತಹ ಒಳ್ಳೇ ವ್ಯಕ್ತಿಗೆ ಕೊಡಲಿಲ್ಲ ಅನ್ನೋ ವಿಚಾರ ನಮ್ಮನ್ನ ಕಾಡ್ತಾ ಇರುತ್ತೆ ಅಂತ ಶಿವರಾಜ್​ಕುಮಾರ್ ಹೇಳಿದ್ರು​.

-masthmagaa.com

Contact Us for Advertisement

Leave a Reply