masthmagaa.com:
ನಟಿ ಶ್ವೇತಾ ತಿವಾರಿ ಧಾರ್ಮಿಕ ವಿಚಾರದಲ್ಲಿ ಬೇಜವಾಬ್ದಾರಿ ಹೇಳಿಕೆ ಕೊಟ್ಟು ವಿವಾದ ಮಾಡಿಕೊಂಡಿದ್ದಾರೆ. ‘ಇನ್ಮುಂದೆ ನನ್ನ ಒಳುಡುಪಿನ ಅಳತೆಯನ್ನ ದೇವರು ತಗೋತಾರೆ’ ಅಂದಿದ್ದಾರೆ. ನಟಿ ಶ್ವೇತಾ ತಿವಾರಿ, ಮಹಾಭಾರತದ ಕೃಷ್ಣ ಖ್ಯಾತಿಯ ಸೌರಭ್ ರಾಜ್ ಜೈನ್ ಮತ್ತಿತರರು ನಟಿಸ್ತಿರೋ ಹೊಸ ವೆಬ್ ಸೀರೀಸ್ ಸಂಬಂಧ ಸುದ್ದಿಗೋಷ್ಟಿ ವೇಳೆ ಈ ರೀತಿ ಹೇಳಿದ್ದಾರೆ. ಈ ವೆಬ್ ಸೀರೀಸ್ ನಲ್ಲಿ ಈ ಹಿಂದೆ ಜನಪ್ರಿಯ ಮಹಾಭಾರತ್ ಸರಣಿಯಲ್ಲಿ ಕೃಷ್ಣ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದ್ದ ಸೌರಭ್ ರಾಜ್ ಜೈನ್, ಒಳ ಉಡುಪುಗಳ ಫಿಟಿಂಗ್ ಚೆಕ್ ಮಾಡೋ ರೋಲ್ ನಿಭಾಯಿಸ್ತಿದಾರಂತೆ. ಅವರ ಬಗ್ಗೆ ಕಾಮಿಡಿ ಮಾಡೋಕೆ ಹೋಗಿ ನಟಿ ಶ್ವೇತಾ ತಿವಾರಿ, ‘ಇನ್ಮುಂದೆ ನನ್ನ ಒಳುಡುಪಿನ ಅಳತೆಯನ್ನ ದೇವರು ತಗೋತಾರೆ’ ಅಂದಿದ್ದಾರೆ. ದೇವರು ಅಂದ್ರೆ ಭಗವಾನ್ ಕೃಷ್ಣನ ಪಾತ್ರ ಮಾಡಿದ್ದ ಸೌರಭ್ ಬಗ್ಗೆ ಹೀಗೆ ಹೇಳಿದ್ದಾರೆ. ಆದ್ರೆ ಇದು ಈಗ ಬಹಳ ದೊಡ್ಡ ವಿವಾದವಾಗಿದೆ.
-masthmagaa.com
Contact Us for Advertisement