masthmagaa.com:
ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರವಾದ ಬಳಿಕ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ ಕೂಡ ಜೋರಾಗಿದೆ. ಇವತ್ತು ಸಿದ್ದರಾಮಯ್ಯ ಮಾತನಾಡಿ, ‘ದನಗಳಿಗೆ ವಯಸ್ಸಾದ ಬಳಿಕ ಉಪಯೋಗವಿಲ್ಲ. ಅದರಿಂದ ರೈತರಿಗೆ ಹೊರೆಯಾಗುತ್ತೆ. ಹೀಗಾಗಿ ಅಂತಹ ದನಗಳನ್ನ ಸರ್ಕಾರವೇ ಖರೀದಿಸಬೇಕು’ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ತಿರುಗೇಟು ಕೊಟ್ಟ ಕಂದಾಯ ಸಚಿವ ಆರ್. ಅಶೋಕ್, ‘ಸಿದ್ದರಾಮಯ್ಯಗೆ ಜಾನುವಾರು ಸಾಕಲು ಆಗದಿದ್ದರೆ ನಾನು ಸಾಕುತ್ತೇನೆ. ಅವುಗಳನ್ನ ಬಿಜೆಪಿ ಕಚೇರಿ ಬಳಿ ಅಥವಾ ನನ್ನ ಮನೆಗೆ ತಂದುಬಿಡಿ’ ಅಂತ ಹೇಳಿದ್ದಾರೆ. ‘ನಾವು ಗಂಡು ಕರು, ವಯಸ್ಸಾದ ಹಸುಗಳನ್ನ ಸಾಕುತ್ತೇವೆ. ನಿಮ್ಮ ಹಿರಿಯರನ್ನ ಕೂಡ ಸಾಕುತ್ತೇವೆ. ಅವರನ್ನ ಕೂಡ ಕಳಿಸಿಕೊಡಿ’ ಅಂತ ಆರ್. ಅಶೋಕ್ ತಿರುಗೇಟು ಕೊಟ್ಟಿದ್ದಾರೆ.
-masthmagaa.com
Contact Us for Advertisement