masthmagaa.com:
ಬರ ಪರಿಹಾರ ವಿವಾದ ಸುಪ್ರೀಂಕೋರ್ಟ್ನಲ್ಲಿರೊ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ರಿಯಾಕ್ಟ್ ಮಾಡಿದ್ದಾರೆ. ಸುಪ್ರೀಂಗೆ ಕೇಂದ್ರ ಸರ್ಕಾರ ತಪ್ಪು ಮಾಹಿತಿ ನೀಡಿ, ನ್ಯಾಯಾಲಯದ ದಾರಿ ತಪ್ಪಿಸೊ ಕೆಲ್ಸ ಮಾಡ್ತಿದೆ ಅಂತ ಸಿಎಂ ಆರೋಪಿಸಿದ್ದಾರೆ. ರಾಜ್ಯಕ್ಕೆ ಬರ ಪರಿಹಾರ ನೀಡದೇ ಕೇಂದ್ರ ಸರ್ಕಾರ ಐದಾರು ತಿಂಗಳಿಂದ ರಾಜ್ಯ ಸರ್ಕಾರವನ್ನ ಸತಾಯಿಸ್ತಿದೆ. ಹೀಗಾಗಿ ನಾವು ಸುಪ್ರೀಂ ಮೊರೆ ಹೋಗ್ಬೇಕಾಯ್ತು. ಆದ್ರೆ ಕೋರ್ಟ್ನಲ್ಲಿ ಕೇಂದ್ರ ಸರ್ಕಾರದ ಪರ ವಕೀಲರು ಕರ್ನಾಟಕ ಸರ್ಕಾರವೇ ಬರ ಪರಿಹಾರ ವಿಳಂಬಕ್ಕೆ ಕಾರಣ ಅಂತೇಳ್ತಿರೊದು ವಿಷಾದನೀಯ. ಅಲ್ದೇ ಈ ಅರ್ಜಿಗೆ ಪ್ರತಿಕ್ರಿಯೆ ಕೋರಿ ನಮಗೆ ನೋಟಿಸ್ ನೀಡ್ಬಾರ್ದು ಅಂತ ಕೇಂದ್ರ ಪರ ವಕೀಲರು ಹೇಳಿರೋದು ಕೇಂದ್ರ ಸರ್ಕಾರದ ವೈಫಲ್ಯ ಮುಚ್ಚಿಹಾಕಲು ಕರ್ನಾಟಕ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನವಾಗಿದೆ ಅಂತ ಸಿಎಂ ಕಿಡಿಕಾರಿದ್ದಾರೆ.
-masthmagaa.com
Contact Us for Advertisement