masthmagaa.com:
ಈ ಬಾರಿ ಮುಖ್ಯವಾಗಿ ಮೈಸೂರು-ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನ ಗೆಲ್ಲಲು ಪಣತೊಟ್ಟಿರೊ ಸಿಎಂ ಸಿದ್ದರಾಮಯ್ಯ ಬಿರುಸಿನ ಪ್ರಚಾರ ನಡೆಸಿದ್ದಾರೆ. ವರುಣಾ ವಿಧಾನ ಸಭಾ ವ್ಯಾಪ್ತಿಯ ಪ್ರಚಾರ ಭಾಷಣದಲ್ಲಿ ಮಾತನಾಡಿದ ಸಿಎಂ, ʻವರುಣಾ ನನ್ನ ಪಾಲಿಗೆ ಅದೃಷ್ಟದ ಕ್ಷೇತ್ರ. ನಿಮ್ಮಿಂದ ಎರಡು ಬಾರಿ ಮುಖ್ಯಮಂತ್ರಿಯಾದೆ. ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ಗೆ 60 ಸಾವಿರ ಲೀಡ್ ಕೊಡ್ಬೇಕು. ನಾನು ಸಿಎಂ ಆಗಿ ಇರ್ಬೇಕಾ ಬೇಡಾ ಹೇಳಿ? ಸಿಎಂ ಆಗಿ ಮುಂದುವರಿಬೇಕೆಂದ್ರೆ 60 ಸಾವಿರ ಲೀಡ್ ಕೋಡ್ಬೇಕುʼ ಅಂತ ಮತದಾರರಲ್ಲಿ ವಿನಂತಿ ಮಾಡಿದ್ದಾರೆ. ಅಲ್ದೇ ʻವರುಣಾದಲ್ಲಿ ಲೀಡ್ ಕೊಟ್ರೆ ಯಾರು ನನ್ನ ಮುಟ್ಟಲ್ಲʼ ಅಂತೇಳಿದ್ದಾರೆ.
-masthmagaa.com
Contact Us for Advertisement