ಸಿದ್ದರಾಮಯ್ಯ ಎಲೆಕ್ಷನ್‌ಗೆ ನಿಲ್ಲದಿರೊದೇ ಒಳ್ಳೇದು ಎಂದು ಅಚ್ಚರಿ ಹೇಳಿಕೆ ಕೊಟ್ಟ ಸಿದ್ದು ಆಪ್ತ!

masthmagaa.com:

ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ಮಾಡ್ತಿದ್ದಾರೆ ಅಂತ ಟೀಕೆಗಳು ಕೇಳಿ ಬರ್ತಿರೋ ಹೊತ್ತಲ್ಲೇ ಸಿದ್ದು ಆಪ್ತ, ಮಾಜಿ ಸಚಿವ ಸಂತೋಷ್‌ ಲಾಡ್‌ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಈ ಚುನಾವಣೆಯಲ್ಲಿ ಎಲ್ಲಿ ನಿಂತ್ರೂ ಗೆಲ್ತಾರೆ. ಆದ್ರೆ ಈ ಚುನಾವಣೆಯಲ್ಲಿ ಅವರು ಭಾಗವಹಿಸದೇ ಇರೋದೇ ಒಳ್ಳೇದು. ಬದಲಾಗಿ ಅವರು ರಾಜ್ಯದ್ಯಂತ ಪ್ರವಾಸ ಮಾಡಿ, ಪಕ್ಷಸಂಘಟನೆ ಮಾಡಲಿ ಅಂತ ಹೇಳಿದ್ದಾರೆ. ಮುಂದುವರೆದು ಕೆಪಿಸಿಸಿ ಅಧ್ಯಕ್ಷರು ಕೂಡ ಸ್ಪರ್ಧೆ ಮಾಡೋದು ಬೇಡ, ಪಕ್ಷ ಸಂಘಟನೆ ಮಾಡಲಿ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಮಾಜಿ ಸಿಎಂ ಸಿದ್ದರಾಮಯ್ಯ ಅವ್ರ ಅಭಿಪ್ರಾಯನೂ ಕನ್ಸಿಡರ್‌ ಮಾಡಣ ಅಂದಿದಾರೆ. ಅದ್ರ ಜೊತಗೆ ತಾವು ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸ್ತೀನಿ, ಎರೆಡೆರಡು ಕ್ಷೇತ್ರದಲ್ಲಿ ನಿಲ್ಲಲ್ಲ ಅಂತ ಸ್ಪಷ್ಟಪಡಿಸಿದಾರೆ. ಇನ್ನು ಅತ್ತ ಬಿಜೆಪಿ ಮಾಜಿಸಿಎಂಗಳ ಕ್ಷೇತ್ರಗಳನ್ನ ಟಾರ್ಗೆಟ್‌ ಮಾಡ್ತಿದ್ದು, ವರುಣ, ಕೋಲಾರ ಮತ್ತು ಚನ್ನಪಟ್ಟಣದಲ್ಲಿ ವಿಶೇಷ ಸರ್ವೇ ನಡೆಸ್ತಿದೆ ಎನ್ನಲಾಗಿದೆ. ಮತ್ತೊಂದೆಡೆ ಸಿಎಂ ವಿರುದ್ಧ ಸ್ಪರ್ಧಿಸಲು ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಬಯಸಿ ಒಂದು ಡಜನ್‌ ಜನ ಅರ್ಜಿ ಸಲ್ಲಿಸಿದ್ದಾರೆ.

-masthmagaa.com

Contact Us for Advertisement

Leave a Reply