masthmagaa.com:
ಪಂಜಾಬ್ ಗಾಯಕ ಸಿಧು ಮೂಸೆವಾಲ ಹತ್ಯೆ ಬಳಿಕ ಈಗ ಬಾಲಿವುಡ್ ನಟ ಸಲ್ಮಾನ್ಖಾನ್ ಹಾಗೂ ಅವರ ತಂದೆ ಸಲೀಂ ಖಾನ್ ಇಬ್ಬರಿಗೂ ಜೀವಬೆದರಿಕೆ ಒಡ್ಡಲಾಗಿದೆ. ಸಲ್ಮಾನ್ ಖಾನ್ ವಾಕಿಂಗ್ ಬಳಿಕ ರೆಗ್ಯೂಲರ್ ಆಗಿ ವಿಶ್ರಾಂತಿ ತೆಗೆದುಕೊಳ್ಳುವ ಜಾಗದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಪತ್ರವನ್ನ ಇಟ್ಟಿದ್ದು ಅದರಲ್ಲಿ ಮೂಸೆವಾಲ ರೀತಿಯಲ್ಲೇ ಇಬ್ಬರನ್ನೂ ಹತ್ಯೆ ಮಾಡೋದಾಗಿ ಬೆದರಿಸಲಾಗಿದೆ. ಪ್ರಕರಣ ಸಂಬಂಧ ಅಪರಿಚಿತನ ಮೇಲೆ ದೂರು ದಾಖಲಿಸಲಾಗಿದ್ದು ಸಿಸಿಟಿವಿ ಪುಟೇಜ್ ಆಧರಿಸಿ ತನಿಖೆ ನಡೆಸ್ತೀದ್ದೀವಿ ಅಂತ ಪೊಲೀಸರು ಹೇಳಿದ್ದಾರೆ. ಇನ್ನು ಸಿಧು ಮೂಸೆವಾಲ ಹತ್ಯೆ ಆರೋಪದ ಬಿಷ್ಣೋಯಿ ಗ್ಯಾಂಗೇ ಸಲ್ಮಾನ್ ಖಾನ್ಗೂ ಬೆದರಿಕೆ ನೀಡಿರಬಹುದು ಅಂತ ಹೇಳಲಾಗ್ತಿದೆ. ಯಾಕಂದ್ರೆ ಬಿಷ್ಣೋಯಿ ಗುಂಪಿನ ಹಿಟ್ಲಿಸ್ಟ್ನಲ್ಲಿ ಸಲ್ಮಾನ್ ಖಾನ್ ಕೂಡ ಇದ್ರು ಅಂತ ಗೊತ್ತಾಗಿದೆ. ಈ ಸಂಬಂಧ ಈಗಾಗಲೇ ಜೈಲಿನಲ್ಲಿರೋ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಸ್ಣೋಯಿಯನ್ನ ಕೂಡ ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇನ್ನುಈ ಹಿಂದೆ ವಿಚಾರಣೆಗೆ ಒಳಪಡಿಸಿದ್ದಾಗ ಈತ ಈ ಬಗ್ಗೆ ಬಾಯಿಬಿಟ್ಟಿದ್ದು ಸಿನಿಮಾ ಚಿತ್ರೀಕರಣದ ವೇಳೆ ಸಲ್ಮಾನ್ಖಾನ್ನ್ನ ಕೂಡ ಹತ್ಯೆ ಮಾಡೋಕೆ ಸಂಚು ರೂಪಿಸಿದ್ವಿ ಅಂತ ಹೇಳಿದ್ದ. ಇನ್ನು ಈ ಬಾರಿ ಸಲೀಂ ಖಾನ್ ಸೈಕಲ್ನಲ್ಲಿ ಹೋಗ್ಬೇಕಾದ್ರೆ ಹತ್ಯೆ ಮಾಡೋಕೆ ಸಂಚು ರೂಪಿಸಲಾಗಿತ್ತು ಅಂತ ಗೊತ್ತಾಗಿದೆ. ಇದರ ಬೆನ್ನಲ್ಲೇ ನಟನಿಗೆ ಭದ್ರತೆ ಹೆಚ್ಚು ಮಾಡಿದ್ದೀವಿ ಅಂತ ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಇತ್ತ ಸಿಧು ಮೂಸೆವಾಲರ ಹತ್ಯೆಗೆ ಸಂಬಂಧಪಟ್ಟಂತೆ ಕನಿಷ್ಠ 8 ಜನ ಶಂಕಿತ ಶಾರ್ಪ್ ಶೂಟರ್ಗಳನ್ನ ಬಂಧಿಸಲಾಗಿದೆ. ಇನ್ನು ಈ ಶಂಕಿತರೆಲ್ಲರೂ ರಾಜಸ್ಥಾನ, ಹರ್ಯಾಣ, ಹಾಗೂ ಮಹಾರಾಷ್ಟ್ರ ಮೂಲದವರು ಅಂತ ಪಂಜಾಬ್ ಪೊಲೀಸರು ಮಾಹಿತಿ ನೀಡಿದ್ದಾರೆ.
-masthmagaa.com
Contact Us for Advertisement