masthmagaa.com:
ದಕ್ಷಿಣ ಕನ್ನಡ ಜಿಲ್ಲೆಯ ಮಂಜನಾಡಿ ಬಳಿ ಇತ್ತೀಚೆಗೆ ಸತ್ತುಬಿದ್ದಿದ್ದ 6 ಕಾಗೆಗಳಿಗೆ ಹಕ್ಕಿಜ್ವರ ಬಂದಿರಲಿಲ್ಲ ಅಂತ ಪರೀಕ್ಷಾ ವರದಿಯಲ್ಲಿ ಗೊತ್ತಾಗಿದೆ. ಕಾಗೆಗಳ ಕಳೇಬರ ಸಿಕ್ಕಿದ್ದರಿಂದ ಅವುಗಳು ಹಕ್ಕಿಜ್ವರದಿಂದಲೇ ಸತ್ತಿರಬಹುದು ಅಂತ ಹೇಳಲಾಗಿತ್ತು. ಅಲ್ಲದೆ ಕಾಗೆಗಳ ಸ್ಯಾಂಪಲ್ ಅನ್ನು ಬೆಂಗಳೂರಿಗೆ ಪರೀಕ್ಷೆಗೆ ಕಳಿಸಲಾಗಿತ್ತು. ಇದೀಗ ಪರೀಕ್ಷಾ ವರದಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೈಸೇರಿದ್ದು, ಅದರಲ್ಲಿ ಕಾಗೆಗಳು ಹಕ್ಕಿಜ್ವರದಿಂದ ಸತ್ತಿಲ್ಲ ಅಂತ ಹೇಳಲಾಗಿದೆ. ಈ ಮೂಲಕ ಮಂಜನಾಡಿ, ದಕ್ಷಿಣ ಕನ್ನಡ ಮತ್ತು ಇಡೀ ರಾಜ್ಯದ ಜನ ನಿಟ್ಟುಸಿರು ಬಿಡುವಂತಾಗಿದೆ. ಕೇರಳದಲ್ಲಿ ಈಗಾಗಲೇ ಹಕ್ಕಿಜ್ವರದಿಂದ ನೂರಾರು ಹಕ್ಕಿಗಳು ಸತ್ತಿರೋದ್ರಿಂದ ಅಲ್ಲಿಂದಲೇ ಕರ್ನಾಟಕಕ್ಕೂ ಹಕ್ಕಿಜ್ವರ ಹರಡಿರಬಹುದು ಅನ್ನೋ ಆತಂಕ ಮೂಡಿತ್ತು. ಇದೀಗ ಆ ಆತಂಕಕ್ಕೆ ತೆರೆ ಬಿದ್ದಿದೆ. ಕೇಂದ್ರ ಸರ್ಕಾರದ ಪ್ರಕಾರದ ದೇಶದಲ್ಲಿ ಇದುವರೆಗೆ 6 ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ – ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಗುಜರಾತ್.
-masthmagaa.com
Contact Us for Advertisement