masthmagaa.com:
ಹಾಳು ಬಿದ್ದ ಮನೆಯೊಂದರಲ್ಲಿ ನಾಲ್ಕು ವರ್ಷಗಳಿಂದ ಕಾಣೆಯಾಗಿದ್ದ ಒಂದೇ ಕುಟುಂಬದ ಐದು ಜನರ ಅಸ್ಥಿ ಪಂಜರಗಳು ಪತ್ತೆಯಾದ ವಿಚಾರ ಚಿತ್ರದುರ್ಗದಲ್ಲಿ ವರದಿಯಾಗಿದೆ. ಈ ಅಸ್ಥಿ ಪಂಜರಗಳು ಚಿತ್ರದುರ್ಗ ನಗರದ ನಿವಾಸಿ ನಿವೃತ್ತ ಎಕ್ಸಿಕ್ಯುಟೀವ್ ಇಂಜಿನಿಯರ್ ಜಗನ್ನಾಥ್ ರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣರೆಡ್ಡಿ, ನರೇಂದ್ರ ರೆಡ್ಡಿಅವರದ್ದು ಎನ್ನಲಾಗಿದೆ. 2019ರಲ್ಲೇ ಇವರೆಲ್ಲ ದರೋಡೆ ಪ್ರಕರಣವೊಂದರಲ್ಲಿ ಮನನೊಂದು ಡೆತ್ನೋಟ್ ಬರೆದಿಟ್ಟು ವಿಷ ಸೇವಿಸಿ ಸಾವಿಗೆ ಶರಣಾಗಿದ್ರು ಅಂತ ಹೇಳಲಾಗ್ತಿದೆ. ಆ ಟೈಮಲ್ಲಿ ಸುತ್ತಮುತ್ತಲ ಜನರು ಕೆಲವು ದಿನ ಈ ಮನೆಯಿಂದ ಏನೋ ವಾಸನೆ ಬರ್ತಿದೆ ಅಂತಾ ಮಾತಾಡಿಕೊಂಡು ಆಮೇಲೆ ಸುಮ್ಮನಾಗಿದ್ರಂತೆ. ಆಶ್ಚರ್ಯ ಏನಪ್ಪಾ ಅಂದ್ರೆ 4 ವರ್ಷವಾದ್ರೂ ಇತ್ತ ಯಾರು ಕೂಡ ಏನು, ಎತ್ತ, ಯಾಕ್ ಯಾರೂ ಕಾಣಿಸ್ತಿಲ್ಲ ಅಂತ ಈ ಕಡೆ ತಿರುಗಿ ನೋಡಿಲ್ಲ. ಶುಕ್ರವಾರ ಬೆಳಿಗ್ಗೆ ನಾಯಿಯೊಂದು ತಲೆ ಬುರಡೆಯನ್ನ ಅವ್ರ ಮನೆ ಹತ್ರ ಬಿಸಾಡ್ತಿತ್ತು, ಇತ್ತ ಅವ್ರ ಮನೆ ಬಾಗಿಲು ಕೂಡ ಓಪನ್ ಆಗಿತ್ತು. ಈ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನಲೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೋಲಿಸರು ಸ್ಥಳಕ್ಕೆ ಬಂದಾಗ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ಥಳೀಯರು ಆ ಮನೆಯಲ್ಲಿ ಕಳೆದ 10 ವರ್ಷಗಳ ಹಿಂದೆ ನಾಲ್ವರು ಮಾತ್ರ ವಾಸವಾಗಿದ್ರು. ಮನೆಯಿಂದ ಯಾರು ಹೊರಬರ್ತಿರಲಿಲ್ಲ. ಈ ಮನೆಯವ್ರಿಗೆ ಜನಸಂಪರ್ಕ ಇರಲಿಲ್ಲ ಅಂತ ತಿಳಿಸಿದ್ದಾರೆ. ಸದ್ಯ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಈ ಪ್ರಕರಣದ ಬಗ್ಗೆ ಪರಿಶೀಲನೆ ಮಾಡ್ತಿದೆ ಅಂತ ವರದಿಯಾಗಿದೆ.
-masthmagaa.com
Contact Us for Advertisement