ಪ್ರಧಾನಿ ಮೋದಿಗೆ ಲಡಾಖ್‌ನ ಸೋನಮ್‌ ವಾಂಗ್ಚೂಕ್‌ನ ಕೊನೇ ಮನವಿ!

masthmagaa.com:

ಲಡಾಖ್‌ನ ಫೇಮಸ್‌ ಇಂಜಿನಿಯರ್‌ ಮತ್ತು ಹೋರಾಟಗಾರ ಸೋನಮ್‌ ವಾಂಗ್ಚೂಕ್‌ ಅವ್ರ ಉಪವಾಸ ಸತ್ಯಾಗ್ರಹ ಇದೀಗ 16ನೇ ದಿನಕ್ಕೆ ಕಾಲಿಟ್ಟಿದೆ. ಲಡಾಖ್‌ ಕೇಂದ್ರಾಡಳಿತ ಪ್ರದೇಶಕ್ಕೆ ಸಾಂವಿಧಾನಿಕ ರಕ್ಷಣೆ ಸಿಗ್ಬೇಕು…ಅಲ್ಲಿ ನಡೆಯೋ ಕೈಗಾರಿಕೆ ಮತ್ತು ಗಣಿಗಾರಿಕೆ ವಿರುದ್ಧ ಪ್ರತಿಭಟನೆ ನಡೆಸ್ತಿರೋ ವಾಂಗ್ಚೂಕ್‌ ತಮ್ಮ ಕೊನೆಯ ಮನವಿಯನ್ನ ಪ್ರಧಾನಿ ನರೇಂದ್ರ ಮೋದಿಯವ್ರ ಮುಂದಿಟ್ಟಿದ್ದಾರೆ. ʻನೀವು ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸಂವಿಧಾನದ 6ನೇ ಶೆಡ್ಯೂಲ್‌ ಅಡಿಯಲ್ಲಿ ಲಡಾಖ್‌ನ ರಕ್ಷಣೆ ಮಾಡೋದಾಗಿ ಪ್ರಮಾಣ ಮಾಡಿದ್ರಿ. ಆದ್ರೆ ಇದೀಗ ನಮ್ಮ ಹೋರಾಟಕ್ಕೆ ನಾಲ್ಕು ವರ್ಷಗಳೇ ಆಗಿವೆ. ಸರ್ಕಾರದಿಂದ ಯಾವ್ದೇ ರೆಸ್ಪಾನ್ಸ್‌ ಸಿಕ್ಕಿಲ್ಲ. ಆರ್ಟಿಕಲ್‌ 370 ರದ್ದತಿ ನಂತ್ರ ಜಮ್ಮು & ಕಾಶ್ಮೀರಕ್ಕೆ ಸಿಕ್ಕ ಸ್ಥಾನಮಾನಗಳು ಲಡಾಖ್‌ಗೂ ಸಿಗ್ಬೇಕುʼ ಅಂತ ಕೋರಿದ್ದಾರೆ.

-masthmagaa.com

Contact Us for Advertisement

Leave a Reply