masthmagaa.com:
ತೆಲಂಗಾಣದಲ್ಲಿ ನೆನ್ನೆ ನಡೆದ ಚುನಾವಣಾ ರ್ಯಾಲಿಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತೆಲಂಗಾಣ ಸಪರೇಟ್ ರಾಜ್ಯವಾಗಲು ಸೋನಿಯಾ ಗಾಂಧಿಯವರೇ ಕಾರಣ ಅಂತ ಹೇಳಿದ್ದಾರೆ. ತನ್ನ ತಾಯಿ ಸೋನಿಯಾ ಗಾಂಧಿಯವರ ಸಹಾಯವಿಲ್ಲದಿದ್ದರೆ ತೆಲಂಗಾಣ ಪ್ರತ್ಯೇಕ ರಾಜ್ಯವಾಗಲು ಸಾಧ್ಯವಾಗ್ತಾ ಇರಲಿಲ್ಲ ಅಂತ ಹೇಳಿದ್ದಾರೆ. ಆದ್ರೆ ಈ ಹೇಳಿಕೆಗೆ BRS ನಾಯಕಿ ಕೆ. ಕವಿತಾ ತೀಕ್ಷ್ಣವಾಗಿ ರಿಯಾಕ್ಟ್ ಮಾಡಿದ್ದು, ʻಗಾಂಧಿ ಕುಟುಂಬಕ್ಕೆ ತೆಲಂಗಾಣ ಜೊತೆ ನಂಟಿರೋ ರಾಹುಲ್ ಗಾಂಧಿಯವರ ಮಾತನ್ನ ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ನಮ್ಮ ಹಂಬಲವನ್ನ ಕೊಂದು ಆಂಧ್ರ ಪ್ರದೇಶದೊಂದಿಗೆ ತೆಲಂಗಾಣವನ್ನ ಮರ್ಜ್ ಮಾಡಿದ್ದು ಅಂದ್ರೆ ವಿಲೀನಗೊಳಿಸಿದ್ದು ಜವಾಹರಲಾಲ್ ನೆಹರು. 1969ರಲ್ಲಿ ನಾವು ಪ್ರತ್ಯೇಕ ರಾಜ್ಯ ಬೇಕೆಂದು ಕೇಳಿದಾಗ, 369 ಯುವಕರನ್ನ ಸುಟ್ಟಿದ್ದು ಇಂದಿರಾ ಗಾಂಧಿ. ಹಿಂದುಳಿದ ವರ್ಗಕ್ಕೆ ಸೇರಿದ ನಮ್ಮ ಮುಂಖ್ಯಮಂತ್ರಿಯನ್ನ ಇನ್ಸಲ್ಟ್ ಮಾಡಿದ್ದು ರಾಜೀವ್ ಗಾಂಧಿ. ಕಳೆದ 10 ವರ್ಷಗಳಲ್ಲಿ ರಾಹುಲ್ ಗಾಂಧಿ ಯಾವತ್ತೂ ಕೂಡ ತೆಲಂಗಾಣಕ್ಕೆ ಬೆಂಬಲ ಸೂಚಿಸಿಲ್ಲ. ತೆಲಂಗಾಣ ಪರವಾಗಿ ನಿಂತಿಲ್ಲ. ಹೌದು, ತೆಲಂಗಾಣವನ್ನ ನಾಶ ಪಡಿಸುವಲ್ಲಿ ನಿಮ್ಮ ಕುಟುಂಬ ಸಂಪೂರ್ಣವಾಗಿ ಕಾಂಟ್ರಿಬ್ಯೂಟ್ ನೀಡಿದೆ. ತೆಲಂಗಾಣದ ಜನರು ಇದಕ್ಕೆ ತಕ್ಕ ತಿರುಗೇಟನ್ನ ಚುನಾವಣೆಯಲ್ಲಿ ನೀಡ್ತಾರೆ ಅಂತ ವಾಗ್ದಾಳಿ ನಡೆಸಿದ್ದಾರೆ.
-masthmagaa.com
Contact Us for Advertisement