ಗಂಗೂಲಿಯನ್ನು ಹಾಡಿ ಹೊಗಳಿದ ರವಿ ಶಾಸ್ತ್ರಿ..! ಏನ್ ಹೇಳಿದ್ರು ಗೊತ್ತಾ..?

ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಆಯ್ಕೆ ಒಂದು ಉತ್ತಮವಾದ ನಿರ್ಧಾರ ಎಂದು ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ಭಾರತೀಯ ಕ್ರಿಕೆಟ್​​ನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಅದು ಸರಿಯಾಧ ನಿರ್ಧಾರ ಎಂದು ಹೇಳಿದ್ದಾರೆ. ಅಲ್ಲದೆ ಗಂಗೂಲಿ ಸ್ವಾಭಾವಿಕವಾಗಿ ಉತ್ತಮ ನಾಯಕರಾಗಿದ್ದಾರೆ. ಅವರಂತಹ ವ್ಯಕ್ತಿ ಈ ಹುದ್ದೆಗೆ ಸರಿಯಾದ ಆಯ್ಕೆಯಾಗಿದೆ. ಬಂಗಾಳ ಕ್ರಿಕೆಟ್ ಸಂಘದಲ್ಲೂ ಅವರು ಅಧ್ಯಕ್ಷರಾಗಿ ನಾಲ್ಕೈದು ವರ್ಷ ಸೇವೆ ಸಲ್ಲಿಸಿದ್ದಾರೆ. ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿರೋದು ಸರಿಯಾದ ನಿರ್ಧಾರ ಎಂದಿದ್ದಾರೆ. ಅಲ್ಲದೆ ಸೌರವ್ ಗಂಗೂಲಿಯವರಿಗೆ ಶುಭಾಶಯಗಳನ್ನು ಹೇಳಲು ಬಯಸುತ್ತೇನೆ ಎಂದಿದ್ದಾರೆ.

Contact Us for Advertisement

Leave a Reply