masthmagaa.com:
ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಕೆಳಗಿಳಿತಾರಾ ಅನ್ನೋ ಪ್ರಶ್ನೆ ಸಾಕಷ್ಟು ಸುದ್ದಿಯಲ್ಲಿತ್ತು. ಆದರೆ ಇದೀಗ ದ್ರಾವಿಡ್ರನ್ನ ಕೋಚ್ ಆಗಿ ಬಿಸಿಸಿಐ ಮುಂದುರೆಸಿದ್ದು, ಈ ಬಗ್ಗೆ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ. ಬಿಸಿಸಿಐ ದ್ರಾವಿಡ್ರನ್ನ ಕೋಚ್ ಆಗಿ ಮುಂದುವೆರೆಸಿರೋದು ನನಗೆ ಆಶ್ಚರ್ಯ ತಂದಿಲ್ಲ. ಬದಲಿಗೆ ಖುಷಿ ತಂದಿದೆ. ನಾನು ಬಿಸಿಸಿಐ ಅಧ್ಯಕ್ಷನಾಗಿದ್ದಾಗ ದ್ರಾವಿಡ್ರನ್ನ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಮುಂದಿನ ವರ್ಷದ ಜೂನ್ನಲ್ಲಿ ನಡೆಯುವ ಟಿ-20 ವರ್ಲ್ಡ್ ಕಪ್ಗೆ ದ್ರಾವಿಡ್ ತರಬೇತಿಯ ಟೀಮ್ ಇಂಡಿಯಾಕ್ಕೆ ಶುಭವಾಗಲಿ ಎಂದಿದ್ದಾರೆ. ಈ ವಿಶ್ವಕಪ್ ಟೀಮ್ ಇಂಡಿಯಾ ಗೆಲ್ಲದೇ ಇರಬಹುದು ಆದರೆ ವಿಶ್ವಕಪ್ನಲ್ಲಿ ಭಾರತ ಬೆಸ್ಟ್ ಟೀಮ್ ಆಗಿ ಹೊರಹೊಮ್ಮಿದೆ ಅಂತ ದಾದಾ ಹೇಳಿದ್ದಾರೆ. ಅಂದ್ಹಾಗೆ ಮುಂದಿನ ವರ್ಷದ ಟಿ-20 ವಿಶ್ವಕಪ್ ವರೆಗೆ ದ್ರಾವಿಡ್ರ ಕೋಚ್ ಅವಧಿಯನ್ನ ಬಿಸಿಸಿಐ ನವೆಂಬರ್ 29 ರಂದು ವಿಸ್ತರಣೆ ಮಾಡಿತ್ತು.
-masthmagaa.com
Contact Us for Advertisement