masthmagaa.com:
ಇಮ್ರಾನ್ ಖಾನ್ಗೆ ಇವತ್ತು ಮತ್ತೊಂದು ಮುಖಭಂಗ… ಇಮ್ರಾನ್ ಖಾನ್ ಬಹಳ ಖುಷಿಯಲ್ಲಿದ್ರು. ನಾಡಿದ್ದು ಶ್ರೀಲಂಕಾಗೆ ಹೋದಾಗ ಅಲ್ಲಿನ ಪಾರ್ಲಿಮೆಂಟ್ನಲ್ಲಿ ಒಳ್ಳೆ ದಾದಾ ಥರ ಭಾಷಣ ಮಾಡ್ತೀನಿ. ಎಲ್ಲಾ ಪೇಪರ್ ಟಿವಿಗಳಲ್ಲಿ ಅದು ಬರುತ್ತೆ ಅಂತಾ ಖುಷಿಯಾಗಿದ್ರು. ಆದ್ರೆ ಶ್ರೀಲಂಕ ಕಡೆ ಗಳಿಗೆಯಲ್ಲಿ ಪಾಕ್ ಪ್ರಧಾನಿಯ ಶ್ರೀಲಂಕ ಸಂಸತ್ ಭಾಷಣವನ್ನ ಕ್ಯಾನ್ಸೆಲ್ ಮಾಡಿ ಖಾನ್ಗೆ ಶಾಕ್ ನೀಡಿದೆ. ಈ ಹಿಂದೆ ಪಾಕಿಸ್ತಾನ ಸರ್ಕಾರದ ಮನವಿ ಮೇರೆಗೆ ಇದನ್ನ ಕಾರ್ಯಕ್ರಮ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದ್ರೆ ಏಕಾಏಕಿ ಕ್ಯಾನ್ಸೆಲ್ ಮಾಡಿ ಇಮ್ರಾನ್ ಖಾನ್ಗೆ ಶ್ರೀಲಂಕ ಅವಮಾನ ಮಾಡಿದೆ. ಇಮ್ರಾನ್ ಖಾನ್ಗೆ ಇಷ್ಟೆಲ್ಲ ಮಹತ್ವ ನೀಡಿದರೆ ಭಾರತಕ್ಕೆ ಅಸಮಾಧಾನ ಆಗಬಹುದು ಅನ್ನೋ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಅಂತಾ ವರದಿಯಾಗಿದೆ.
ಶ್ರೀಲಂಕ ಸರ್ಕಾರದಲ್ಲೂ ಒಂದು ವರ್ಗ ಭಾರತದ ಪರವಾಗಿ ಬ್ಯಾಟಿಂಗ್ ಮಾಡಿದೆ. ಈಗಾಗಲೇ ನಾವು ಚೀನಾಗೇ ಕ್ಲೋಸ್ ಆಗಿ ಭಾರತದ ಸ್ನೇಹ ಹಾಳು ಮಾಡಿಕೊಂಡಿದ್ದೇವೆ. ಈಗ ಪಾಕಿಸ್ತಾನದ ಪ್ರಧಾನಿ ನಮ್ಮ ಪಾರ್ಲಿಮೆಂಟಲ್ಲಿ ನಿಂತು ಭಾರತದ ಬಗ್ಗೆ ಏನಾದ್ರೂ ಮಾತಾಡಿಬಿಟ್ರೆ ಮುಗಿದೇ ಹೋಯ್ತು. ಭಾರತದೊಂದಿಗೆ ಸಂಬಂಧ ಪೂರ್ತಿ ಹಾಳಾಗುತ್ತೆ. ಈ ಚೀನಾದಿಂದ ಸ್ವಲ್ಪ ಲಾಭವಾದ್ರೂ ಇದೆ. ಆದ್ರೆ ಪಾಕಿಸ್ತಾನದಿಂದ ಲಂಕಾಗೇ ಅಂತ ದೊಡ್ಡ ಲಾಭವೂ ಇಲ್ಲ. ಹೀಗಿರೋವಾಗ ಇದೆಲ್ಲ ಕಿತಾಪತಿ ಯಾಕೆ ಅಂತಾ ಈ ಗುಂಪು ಅಧ್ಯಕ್ಷ ಗೋಬಯ ರಾಜಪಕ್ಷಗೆ ಮನವರಿಕೆ ಮಾಡಿಕೊಟ್ಟಿದೆ ಅಂತ ಹೇಳಲಾಗಿದೆ. ಇದೇ ಕಾರಣಕ್ಕೆ ಈ ಹಿಂದೆ ಇಮ್ರಾನ್ ಖಾನ್ ಭಾಷಣಕ್ಕೆ ಒಪ್ಪಿಗೆ ಕೊಟ್ಟಿದ್ದ ಶ್ರೀಲಂಕ ಸಂಸತ್ ಸ್ಪೀಕರ್ ಮಹಿಂದ ಯಪಾ ಅಬೆಯವರ್ದೆನಾ, ಈಗ ಕೊರೋನ ನೆಪ ಕೊಟ್ಟು ಕ್ಯಾನ್ಸೆಲ್ ಮಾಡಿದ್ದಾರೆ ಅಂತ ಹೇಳಲಾಗಿದೆ.
-masthmagaa.com
Contact Us for Advertisement